ದೇಶ

ಕೇಸರಿ ಪಕ್ಷದ ಕರುಣೆಯಿಂದ ಅಧಿಕಾರಕ್ಕೆ ಬಂದಿಲ್ಲ: ಸರ್ಕಾರ ಬೀಳಿಸುವ ಅಮಿತಾ ಶಾ ಹೇಳಿಕೆಗೆ ಕೇರಳ ಸಿಎಂ ತಿರುಗೇಟು

Lingaraj Badiger
ಚೆನ್ನೈ: ನಮ್ಮ ಪಕ್ಷ ಜನಾರ್ಶೀವಾದದಿಂದ ಅಧಿಕಾರಕ್ಕೆ ಬಂದಿದೆ. ಕೇಸರಿ ಪಕ್ಷದ ಕರುಣೆಯಿಂದ ಅಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಶನಿವಾರ ತಿರುಗೇಟು ನೀಡಿದ್ದಾರೆ.
ನಮ್ಮ ಪಕ್ಷ ಎಲ್ ಡಿಎಫ್ ಸರ್ಕಾರ ಉರುಳಿಸಲಿದೆ ಎಂಬ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇರಳ ಸಿಎಂ, ಜನಾದೇಶವನ್ನು ಹಾಳು ಮಾಡುವ ಉದ್ದೇಶದಿಂದ ಅವರು ಈ ರೀತಿ ಹೇಳಿದ್ದಾರೆ ಎಂದರು.
ಶಬರಿಮಲೆ ವಿಚಾರಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಅವರು ಕಣ್ಣೂರಿನಲ್ಲಿ ನೀಡಿದ ಹೇಳಿಕೆ ಸಂವಿಧಾನ ಮತ್ತು ಈ ನೆಲದ ಕಾನೂನಿಗೆ ವಿರುದ್ಧವಾಗಿದೆ ಎಂದರು.
ನಮ್ಮ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ ಮತ್ತು ಇದು ಬಿಜೆಪಿ ಮತ್ತು ಆರ್ ಎಸ್ಎಸ್ ನ ಅಜೆಂಡಾವನ್ನು ತೋರಿಸುತ್ತದೆ ಎಂದರು ವಿಜಯನ್ ಹೇಳಿದ್ದಾರೆ.
SCROLL FOR NEXT