ಸಂಗ್ರಹ ಚಿತ್ರ 
ದೇಶ

ಕೇರಳ ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಜೈಸಲ್‌ಗೆ ಮಹೀಂದ್ರ ಕೊಟ್ಟ ಭರ್ಜರಿ ಗಿಫ್ಟ್!

ರುದ್ರ ಮಹಾಜಲಪ್ರಳಯಕ್ಕೆ ತತ್ತರಿಸಿದ್ದ ಕೇರಳದಲ್ಲಿ ಪ್ರವಾಹದ ವೇಳೆ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಜೈಸಲ್ ಗೆ ಮಹೀಂದ್ರ ಸಂಸ್ಧೆ ಭರ್ಜರಿ ಗಿಫ್ಟ್ ನೀಡಿದೆ...

ತಿರುವನಂತಪುರ: ರುದ್ರ ಮಹಾಜಲಪ್ರಳಯಕ್ಕೆ ತತ್ತರಿಸಿದ್ದ ಕೇರಳದಲ್ಲಿ ಪ್ರವಾಹದ ವೇಳೆ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಜೈಸಲ್ ಗೆ ಮಹೀಂದ್ರ ಸಂಸ್ಧೆ ಭರ್ಜರಿ ಗಿಫ್ಟ್ ನೀಡಿದೆ. 
ಪ್ರವಾಹದ ವೇಳೆ ಸಂತ್ರಸ್ತರು ದೋಣಿಯನ್ನು ಹತ್ತಲು ನೆರವಾಗಲು ಜೈಸಲ್ ನೀರಿನ ಮಧ್ಯೆ ನೆಲಕ್ಕೆ ಬಾಗಿ ಬೆನ್ನು ನೀಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಜೈಸಲ್ ನಡೆಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿತ್ತು. 
ಇದೀಗ ಮಹೀಂದ್ರ ಸಂಸ್ಧೆ ತನ್ನ ಹೊಸ ಉತ್ಪನ್ನ ಕಳೆದ ವಾರವಷ್ಟೇ ಮಾರುಕಟ್ಟೆಗೆ ಬಂದಿದ್ದ ಮಹಿಂದ್ರ ಮರಾಜೋ ಕಾರನ್ನು ಮಹೀಂದ್ರ ಕಾರು ಮಾರಾಟ ಘಟಕ ಈರಂ ಮೋಟಾರ್ಸ್ ವತಿಯಿಂದ ಜೈಸಲ್ ಗೆ ನೀಡಿದೆ. 
ಮಹೀಂದ್ರ ಮರಾಜೋ ಕಾರಿನ ಬೆಲೆ 9..99 ಲಕ್ಷ ರುಪಾಯಿಯಾಗಿದ್ದು ಕೇರಳ ಕಾರ್ಮಿಕ ಸಚಿವ ಟಿಪಿ ರಾಮಕೃಷ್ಣನ್ ಅವರು ಜೈಸಲ್ ಗೆ ಕಾರಿನ ಕೀ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT