ಸಂಗ್ರಹ ಚಿತ್ರ 
ದೇಶ

ಮಧ್ಯಪ್ರದೇಶ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅನಾಥಾಶ್ರಮ ಮಾಲೀಕ ಸೇರಿ ಮೂವರ ಬಂಧನ

ಎರಡು ಅನಾಥಾಶ್ರಮಗಳಲ್ಲಿನ ಕಿವುಡ ಹಾಗೂ ಮೂಕ ಮಕ್ಕಳ ಲೈಂಗಿಕ ದುರ್ಬಳಕೆ ಆರೋಪದಡಿಯಲ್ಲಿ ಆಡ್ರಯ ಮನೆಯ ಮುಖ್ಯಸ್ಥ ಮತ್ತು ಇನ್ನೂ ಇಬ್ಬರನ್ನು ಬಂಧಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಭೋಪಾಲ್: ಎರಡು ಅನಾಥಾಶ್ರಮಗಳಲ್ಲಿನ ಕಿವುಡ ಹಾಗೂ ಮೂಕ ಮಕ್ಕಳ ಲೈಂಗಿಕ ದುರ್ಬಳಕೆ ಆರೋಪದಡಿಯಲ್ಲಿ ಅನಾಥಾಶ್ರಮದ ಮುಖ್ಯಸ್ಥ ಮತ್ತು ಇನ್ನೂ ಇಬ್ಬರನ್ನು ಬಂಧಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಮೂರು ಪ್ರಕರಣದಲ್ಲಿ ಆರೋಪಿಗಳಾಗಿರುವ ಆಶ್ರಯ ಮನೆ ಮುಖ್ಯಸ್ಥ ಎಂಪಿ ಅವಾಶಿ (70)ಮತ್ತು ಅವರ ಸೋದರ  ವಿಜಯ್ ಸಹಾಯಕ ರಾಕೇಶ್ ಅವರುಗಳನ್ನು ಪೋಲೀಸರು ಬಂಧಿಸಿದ್ದಾರೆ.
"ಟಿಟಿ ನಗರ ಪೊಲೀಸ್ ಠಾಣೆಯ ಇವರ ವಿರುದ್ಧ ಎರಡು ಪ್ರಕರಣ ದಾಖಲಾಗಿದ್ದವು. ಹೋಶಂಗಾಬಾದ್ ಜಿಲ್ಲಾ ಪೋಲೀಸರು ಹಾಗೂ ಭೋಪಾಲ್ ನ ಖಾಜುರಿ ಪೋಲೀಸ್ ಠಾಣೆ ಪೋಲೀಸರು ಈ ಕುರಿತಂತೆ ತನಿಖೆ ಕೈಗೊಂಡಿದ್ದಾರೆ ಎಂದು ಭೋಪಾಲ್ ಡಿಐಜಿ  ಧರ್ಮೇಂದ್ರ ಚೌಧರಿ ತಿಳಿಸಿದ್ದಾರೆ
ಇಬ್ಬರು ಬಾಲಕಿಯರ ದೂರಿನ ಮೇರೆಗೆ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ.ಈ ಮೂವರೂ ಬಾಲಕಿಯರನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ದೂರು ನೀಡಲಾಗಿದೆ.ಸಮಾಜ ಕಲ್ಯಾಣ ಇಲಾಖೆ ದೂರಿನ ಮೇಲೆ ಖಾಜುರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ 12 ವರ್ಷ ವಯಸ್ಸಿನ ಮಕ್ಕಳ ಅತ್ಯಾಚಾರ ಅಪರಾಧಿಗಳಿಗೆ ಇತ್ತೀಚೆಗೆ ತಿದ್ದುಪಡಿ ಮಾಡಿದ ಕ್ರಿಮಿನಲ್ ಕಾನೂನಿನ ವ್ಯಾಪ್ತಿಯೊಳಗೆ  ಗರಿಷ್ಠ ಶಿಕ್ಷೆ ವಿಧಿಸುವುದಾಗಿ ಪ್ರತಿಪಾದಿಸಿದ್ದರು.
ಈ ಮೇಲಿನ ಪ್ರಕರಣದಲ್ಲಿ ಕಿರುಕುಳ ಹಾಗೂ ದೌರ್ಜನ್ಯಕ್ಕೊಳಗಾದ ಎಲ್ಲಾ ಬಾಲಕಿಯರೂ ಅಪ್ರಾಪ್ತೆಯರೇ ಆಗಿದ್ದಾರೆ.
ಆರೋಪಿ ಅವಾಶಿ ಸಮಾಜ ಕಲ್ಯಾಣ ಇಲಾಖೆ ಅನುಮತಿಯ ಮೇರೆಗೆ ರು ಮಲ್ಖೇಡಿ (ಹೋಶಂಗಾಬಾದ್) ಮತ್ತು ಬೈರಗಢ್ (ಭೋಪಾಲ್)  ಗಳಲ್ಲಿ 1991ರಿಂದಲೂ ಅನಾಥಾಶ್ರಮಗಳನ್ನು ನಡೆಸುತ್ತಿದ್ದಾರೆ 
ಕಳೆದ ವರ್ಷ ಹೋಶಂಗಾಬಾದ್ ಅನಾಥಾಶ್ರಮದ ನಿವಾಸಿಗಳು ಲೈಂಗಿಕ ದುರುಪಯೋಗದ ದೂರು ಸಲ್ಲಿಸಿದಾಗಲೂ ಜಿಲ್ಲಾಡಳಿತ ಪೋಲೀಸ್ ಕಾರ್ಯಾಚರಣೆ ನಡೆಸುವ ಬದಲು ಅನಾಥಾಶ್ರಮವನ್ನೇ ಮುಚ್ಚಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT