ಹಾರ್ದಿಕ್ ಪಟೇಲ್ 
ದೇಶ

ಹಾರ್ದಿಕ್‌ ಪಟೇಲ್‌ ಗೆ ನೀರು ಕೊಟ್ಟಿದ್ದು ಯಾರು? ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆ!

ಗಾಂಧಿನಗರ ಪುರಸಭೆಯ ಗುಮಾಸ್ತರ ಹುದ್ದೆಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಾರ್ದಿಕ್ ಪಟೇಲ್ ಗೆ ಸಂಬಂಧಿಸಿದ ಪ್ರಶ್ನೆ ಕೇಳಿರುವುದು ಈಗಾ ಭಾರಿ ...

ಅಹಮದಾಬಾದ್: ಗಾಂಧಿನಗರ ಪುರಸಭೆಯ ಗುಮಾಸ್ತರ ಹುದ್ದೆಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ  ಹಾರ್ದಿಕ್ ಪಟೇಲ್ ಗೆ ಸಂಬಂಧಿಸಿದ ಪ್ರಶ್ನೆ ಕೇಳಿರುವುದು ಈಗಾ ಭಾರಿ ವಿವಾದಕ್ಕೆ ಕಾರಣವಾಗಿದೆ. 
ಪಾಟಿದಾರ್‌ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಇತ್ತಿಚೆಗೆ 19 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ ಪಾಟಿದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರಿಗೆ 'ನಿರಶನವನ್ನು ಕೊನೆಗೊಳಿಸಲು ಯಾವ ನಾಯಕ ಅವರಿಗೆ ನೀರು ಕೊಟ್ಟರು' ಎಂಬ ಪ್ರಶ್ನೆಯನ್ನು ಕೇಳಲಾಗಿದೆ.
ಹಾರ್ದಿಕ್‌ ಪಟೇಲ್‌ ಉಪವಾಸ ಸತ್ಯಾಗ್ರಹ ಮುಗಿಸಲು ನೀರು ಕೊಟ್ಟ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ನಾಲ್ಕು ಆಯ್ಕೆಗಳಿದ್ದವು. ಅವೆಂದರೆ 1. ಶರದ್‌ ಯಾದವ್‌, 2. ಶತ್ರುಘ್ನ ಸಿನ್ಹಾ, 3. ಲಾಲು ಪ್ರಸಾದ್‌ ಯಾದವ್‌, 4. ವಿಜಯ್‌ ರೂಪಾಣಿ. ಸರಿಯಾದ ಉತ್ತರ ಜೆಡಿಯು ನ ಶರದ್‌ ಯಾದವ್‌ ಎಂಬುದಾಗಿತ್ತು. 
25 ವರ್ಷದ ಹಾರ್ದಿಕ್‌ ಅವರು ಕಳೆದ ಆಗಸ್ಟ್‌ 25ರಂದು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT