ನವದೆಹಲಿ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವ ಮೂಲಕ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ಈ ಮಧ್ಯೆ ಸಾಂವಿಧಾನಿಕ ಪೀಠದಲ್ಲಿ ನ್ಯಾಯಾಧೀಶೆಯಾಗಿರುವ ಇಂದು ಮಲ್ಹೋತ್ರಾ ಅವರು ಸುಪ್ರೀಂ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಸಾಂವಿಧಾನಿಕ ಪೀಠದಲ್ಲಿ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ, ನ್ಯಾಯಾಧೀಶ ಆರ್ಎಫ್ ನಾರಿಮನ್, ನಾಯಾಧೀಶ ಎಎಂ ಕಾನ್ವಾಲಿಕರ್, ನ್ಯಾಯಾಧೀಶ ಡಿವೈ ಚಂದ್ರಚೂಡ್ ಮತ್ತು ನ್ಯಾಯಾಧೀಶೆ ಇಂದು ಮಲ್ಹೋತ್ರಾ ಇದ್ದರು.
ಧಾರ್ಮಿಕ ಆಚರಣೆಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ಇದು ಆರಾಧಕರ ವಿಷಯ, ಧರ್ಮದ ಅಗತ್ಯ ಏನೆಂಬುದನ್ನು ನಿರ್ಧರಿಸುವ ಅಭ್ಯಾಸ ನ್ಯಾಯಾಲಯಗಳಿಗಿಲ್ಲ ಎಂದು ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಹೇಳಿದ್ದಾರೆ.
ಪ್ರಸ್ತುತ ತೀರ್ಪು ಶಬರಿಮಲೆಗೆ ಸೀಮಿತವಾಗುವುದಿಲ್ಲ. ಇನ್ನು ಆಳವಾದ ಧಾರ್ಮಿಕ ಮನೋಭಾವದ ವಿವಾದಗಳಲ್ಲಿ ಸುಪ್ರೀಂ ಮಧ್ಯಪ್ರವೇಶಿಸಬಾರದು ಎಂದು ಸಾಂವಿಧಾನಿಕ ಪೀಠದ ತೀರ್ಪುನ್ನು ಇಂದು ಮಲ್ಹೋತ್ರಾ ಅವರು ವಿರೋಧಿಸಿದ್ದಾರೆ.
800 ವರ್ಷಗಳ ಪದ್ಧತಿಗೆ ತೆರೆ ಎಳೆಯಲಾಗಿದ್ದು ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವ ಮೂಲಕ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos