ಸುಷ್ಮಾ ಸ್ವರಾಜ್ 
ದೇಶ

'ಜರಿದವರೆನ್ನ ಜನ್ಮ ಬಂಧುಗಳೆಂಬೆ': ಬೈದರೂ ತಾಳ್ಮೆ ಕಳೆದುಕೊಳ್ಳದೆ ಪ್ರತಿಕ್ರಿಯಿಸಿದ ಸಚಿವೆ ಸುಷ್ಮಾ ಸ್ವರಾಜ್!

ಜನರ ಸಮಸ್ಯೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಂಧಿಸುವ ಸುಷ್ಮಾ ಸ್ವರಾಜ್ ಎಂಥಹ ಸಂದರ್ಭಗಳಲ್ಲೂ ತಾಳ್ಮೆ ಕಳೆದುಕೊಂಡು ಪ್ರತಿಕ್ರಿಯೆ ನೀಡಿದ ಉದಾಹರಣೆಗಳಿಲ್ಲ. ಇದು ಮತ್ತೊಮ್ಮೆ ಸಾಬೀತಾಗಿದೆ.

ನವದೆಹಲಿ: ಜನರ ಸಮಸ್ಯೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಂಧಿಸುವ ಸುಷ್ಮಾ ಸ್ವರಾಜ್ ಎಂಥಹ ಸಂದರ್ಭಗಳಲ್ಲೂ ತಾಳ್ಮೆ ಕಳೆದುಕೊಂಡು ಪ್ರತಿಕ್ರಿಯೆ ನೀಡಿದ ಉದಾಹರಣೆಗಳಿಲ್ಲ. ಇದು ಮತ್ತೊಮ್ಮೆ ಸಾಬೀತಾಗಿದೆ. 
ತಾವೇಕೆ ಹೆಸರಿನ ಹಿಂದೆ ಚೌಕೀದಾರ್ ಎಂದು ಹಾಕಿಕೊಂಡಿದ್ದೇನೆ ಎಂಬುದನ್ನು ಟ್ವೀಟಿಗರಿಗೆ ಹೇಳಿದ್ದ ಸುಷ್ಮಾ ಸ್ವರಾಜ್ ಈಗ ವ್ಯಕ್ತಿಯೋರ್ವ ತಮ್ಮನ್ನು ತಮ್ಮ ಇಲಾಖೆಯನ್ನು ನಿಂದಿಸಿದರೂ ಸಹ ತಾಳ್ಮೆಯಿಂದ ಉತ್ತರಿಸಿದ್ದಾರೆ. 
ಸರಿಯಾದ ಸಮಯದಲ್ಲಿ ಪಾಸ್ಪೋರ್ಟ್ ಸಿಗದೇ ಉದ್ಯೋಗ ಕೈತಪ್ಪಿದ್ದರಿಂದ ಹತಾಶಗೊಂಡಿದ್ದ ವ್ಯಕ್ತಿಯೋರ್ವ ನೀವು ಚೌಕೀದಾರ್ ಅಲ್ಲ, ನಾಚಿಕೆಗೇಡಿ, ಅಜ್ಞಾನಿ ಸಚಿವರು. ಕೇವಲ ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳುತ್ತೀರಿ, ನಿಮ್ಮ ಹಿತಾಸಕ್ತಿಗಾಗಿ ಹಣ ಕೊಟ್ಟು ಸುದ್ದಿ ಪ್ರಕಟವಾಗುವಂತೆ ಮಾಡುತ್ತೀರಿ. ಆದರೆ 34,000 ರೂಪಾಯಿ ವೇತನ ಪಡೆಯುತ್ತಿದ್ದ ಸಾಮಾನ್ಯ ವ್ಯಕ್ತಿ ನಾನು ಪಾಸ್ಪೋರ್ಟ್ ಸೂಕ್ತ ಸಮಯಕ್ಕೆ ಸಿಗದ ಕಾರಣ ಉತ್ತಮ ಉದ್ಯೋಗ ಅವಕಾಶವನ್ನು ತಪ್ಪಿಸಿಕೊಂಡೆ. ಈಗಲೂ ಪಾಸ್ಪೋರ್ಟ್ ಹಾಗೂ ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದ್ದೀನಿ ಎಂದು ಟ್ವಿಟರ್ ನಲ್ಲಿ ಸುಷ್ಮಾ ಸ್ವರಾಜ್ ಅವರನ್ನು ಟ್ಯಾಗ್ ಮಾಡಿ ಹೇಳಿದ್ದ. 
ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್, ನಿಮ್ಮ ಅಭಿಪ್ರಾಯಕ್ಕೆ, ಮೆಚ್ಚುಗೆಗೆ ಧನ್ಯವಾದಗಳು ನನ್ನ ಕಚೇರಿ ಅಧಿಕಾರಿಗಳು ನಿಮ್ಮನ್ನು ಸಂಪರ್ಕ ಮಾಡಲಿದ್ದು ಪಾಸ್ಪೋರ್ಟ್ ಪಡೆಯುವುದಕ್ಕೆ ಸಹಕರಿಸಲಿದ್ದಾರೆ ಎಂದಷ್ಟೇ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್