ಮೆಹಬೂಬಾ ಮುಫ್ತಿ 
ದೇಶ

ಆರ್ಟಿಕಲ್ 35ಎ ರದ್ದಾದರೆ ಭಾರತದೊಡನೆ ಜಮ್ಮು ಕಾಶ್ಮೀರ ಸಂಬಂಧ ಅಂತ್ಯ: ಮೆಹಬೂಬಾ ಮುಫ್ತಿ

ಒಂದೊಮ್ಮೆ ನಿಯಮಗಳು ಹಾಗೂ ಪರಿಸ್ಥಿತಿಗಳು ಬದಲಾದದ್ದಾದರೆ ಭಾರತ ಒಕ್ಕೂಟದೊಂದಿಗಿನ ಜಮ್ಮು ಮತ್ತು ಕಾಶ್ಮೀರದ ಸಂಬಂಧ ಶೀಘ್ರವೇ ಕೊನೆಗೊಳ್ಳಲಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ

ಶ್ರೀನಗರ: ಒಂದೊಮ್ಮೆ ನಿಯಮಗಳು ಹಾಗೂ ಪರಿಸ್ಥಿತಿಗಳು ಬದಲಾದದ್ದಾದರೆ ಭಾರತ ಒಕ್ಕೂಟದೊಂದಿಗಿನ ಜಮ್ಮು ಮತ್ತು ಕಾಶ್ಮೀರದ ಸಂಬಂಧ ಶೀಘ್ರವೇ ಕೊನೆಗೊಳ್ಳಲಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ  ಹೇಳಿದ್ದಾರೆ. ಆರ್ಟಿಕಲ್  35 ಎ ವಿಚಾರದಲ್ಲಿ ಅಮಿತ್ ಶಾ ನೀಡಿದ್ದ ಹೇಳಿಕೆಗೆ ಮುಫ್ತಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಜಮ್ಮು ಕಾಶ್ಮೀರದ ಅನಂತ್ ನಾಗ್ ಲೋಕಸಭೆ ಕ್ಷೇತ್ರದಿಂಡ ಕಣಕ್ಕಿಳಿಯಲಿರುವ ಮುಫ್ತಿ ಬುಧವಾರ ತಮ್ಮ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಡನೆ ಮಾತನಾಡಿದ ಮುಫ್ತಿ "ಭಾರತ ಸರ್ಕಾರ ಸಧ್ಯ ಜಾರಿಯಲ್ಲಿರುವ ನಿಯಮ ಹಾಗೂ ಪರಿಸ್ಥಿತಿಗಳನ್ನು ಬದಲಾಯಿಸಿದ್ದಾದರೆ ಕಾಶ್ಮೀರವು ಭಾರತ ಒಕ್ಕೂಟದೊಂದಿಗೆ ಹೊಂದಿರುವ ಸಂಬಂಧ ಕೊನೆಗೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಡನೆ ಸೇರ್ಪಡಿಸಿದ ಅವಧಿಯಲ್ಲಿ ಮಾಡಿಕೊಳ್ಲಆಗಿರುವ ನಿಯಮ ಹಾಗೂಷರತ್ತುಗಳಲ್ಲಿ ಮಾರ್ಪಾಡುಗಳೇನಾದರೂ ಆದಲ್ಲಿ ದೇಶದೊಂದಿಗಿನ ಸಂಬಂಧ ಕೊನೆಯಾಗಲಿದೆ" ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ನಿವಾಸಿಗಳ  ಹಕ್ಕುಗಳ ವಿಷಯದಲ್ಲಿ ಜಾರಿಯಲ್ಲಿರುವ ವಿಶೇಷ ಸ್ಥಾನಮಾನವನ್ನು ಖಾತರಿಪಡಿಸುವ ಆರ್ಟಿಕಲ್  35 ಎ  ಅನ್ನು 2020 ರೊಳಗೆ ರದ್ದುಪಡಿಸಲಾಗುವುದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದರು.
ಮೆಹಬೂಬಾ ಹೇಳುವಂತೆ 2015 ರಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ರಚನೆಯ ಸಮಯದಲ್ಲಿ ನ್ನ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಮತ್ತು ಬಿಜೆಪಿ ನಡುವೆ ಆಗಿರುವ ಒಪ್ಪಂದದ ನಕಲನ್ನೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಳಸಿಕೊಂಡಿದೆ."ಕಾಂಗ್ರೆಸ್ ಪ್ರಣಾಳಿಕೆ  ಮುಫ್ತಿ ಮೊಹಮ್ಮದ್ ಸಯೀದ್ ಬಿಜೆಪಿ ಜೊತೆಗಿನ ಒಪ್ಪಂದದ ನಕಲಾಗಿದೆ.ನಾಗರಿಕ ಪ್ರದೇಶಗಳಲ್ಲಿನ ಸೇನೆಯ ಪ್ರಮಾಧಿಕಾರವನ್ನು ಹಿಂಪಡೆಯುವುದು, ಎ ಎಫ್ ಎಸ್ ಪಿಎ ಮಾರ್ಪಾಡು ಸೇರಿ ಎಲ್ಲಾ ಅಂಶಗಳೂ ಮುಫ್ತಿ ಹಾಗೂ ಬಿಜೆಪಿ ನಡುವೆ ಆಗಿರುವ ಒಪ್ಪಂದದಲ್ಲಿದ್ದಂತೆಯೇ ಇದೆ." ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT