ಮೆಹಬೂಬಾ ಮುಫ್ತಿ 
ದೇಶ

ಆರ್ಟಿಕಲ್ 35ಎ ರದ್ದಾದರೆ ಭಾರತದೊಡನೆ ಜಮ್ಮು ಕಾಶ್ಮೀರ ಸಂಬಂಧ ಅಂತ್ಯ: ಮೆಹಬೂಬಾ ಮುಫ್ತಿ

ಒಂದೊಮ್ಮೆ ನಿಯಮಗಳು ಹಾಗೂ ಪರಿಸ್ಥಿತಿಗಳು ಬದಲಾದದ್ದಾದರೆ ಭಾರತ ಒಕ್ಕೂಟದೊಂದಿಗಿನ ಜಮ್ಮು ಮತ್ತು ಕಾಶ್ಮೀರದ ಸಂಬಂಧ ಶೀಘ್ರವೇ ಕೊನೆಗೊಳ್ಳಲಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ

ಶ್ರೀನಗರ: ಒಂದೊಮ್ಮೆ ನಿಯಮಗಳು ಹಾಗೂ ಪರಿಸ್ಥಿತಿಗಳು ಬದಲಾದದ್ದಾದರೆ ಭಾರತ ಒಕ್ಕೂಟದೊಂದಿಗಿನ ಜಮ್ಮು ಮತ್ತು ಕಾಶ್ಮೀರದ ಸಂಬಂಧ ಶೀಘ್ರವೇ ಕೊನೆಗೊಳ್ಳಲಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ  ಹೇಳಿದ್ದಾರೆ. ಆರ್ಟಿಕಲ್  35 ಎ ವಿಚಾರದಲ್ಲಿ ಅಮಿತ್ ಶಾ ನೀಡಿದ್ದ ಹೇಳಿಕೆಗೆ ಮುಫ್ತಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಜಮ್ಮು ಕಾಶ್ಮೀರದ ಅನಂತ್ ನಾಗ್ ಲೋಕಸಭೆ ಕ್ಷೇತ್ರದಿಂಡ ಕಣಕ್ಕಿಳಿಯಲಿರುವ ಮುಫ್ತಿ ಬುಧವಾರ ತಮ್ಮ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಡನೆ ಮಾತನಾಡಿದ ಮುಫ್ತಿ "ಭಾರತ ಸರ್ಕಾರ ಸಧ್ಯ ಜಾರಿಯಲ್ಲಿರುವ ನಿಯಮ ಹಾಗೂ ಪರಿಸ್ಥಿತಿಗಳನ್ನು ಬದಲಾಯಿಸಿದ್ದಾದರೆ ಕಾಶ್ಮೀರವು ಭಾರತ ಒಕ್ಕೂಟದೊಂದಿಗೆ ಹೊಂದಿರುವ ಸಂಬಂಧ ಕೊನೆಗೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಡನೆ ಸೇರ್ಪಡಿಸಿದ ಅವಧಿಯಲ್ಲಿ ಮಾಡಿಕೊಳ್ಲಆಗಿರುವ ನಿಯಮ ಹಾಗೂಷರತ್ತುಗಳಲ್ಲಿ ಮಾರ್ಪಾಡುಗಳೇನಾದರೂ ಆದಲ್ಲಿ ದೇಶದೊಂದಿಗಿನ ಸಂಬಂಧ ಕೊನೆಯಾಗಲಿದೆ" ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ನಿವಾಸಿಗಳ  ಹಕ್ಕುಗಳ ವಿಷಯದಲ್ಲಿ ಜಾರಿಯಲ್ಲಿರುವ ವಿಶೇಷ ಸ್ಥಾನಮಾನವನ್ನು ಖಾತರಿಪಡಿಸುವ ಆರ್ಟಿಕಲ್  35 ಎ  ಅನ್ನು 2020 ರೊಳಗೆ ರದ್ದುಪಡಿಸಲಾಗುವುದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದರು.
ಮೆಹಬೂಬಾ ಹೇಳುವಂತೆ 2015 ರಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ರಚನೆಯ ಸಮಯದಲ್ಲಿ ನ್ನ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಮತ್ತು ಬಿಜೆಪಿ ನಡುವೆ ಆಗಿರುವ ಒಪ್ಪಂದದ ನಕಲನ್ನೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಳಸಿಕೊಂಡಿದೆ."ಕಾಂಗ್ರೆಸ್ ಪ್ರಣಾಳಿಕೆ  ಮುಫ್ತಿ ಮೊಹಮ್ಮದ್ ಸಯೀದ್ ಬಿಜೆಪಿ ಜೊತೆಗಿನ ಒಪ್ಪಂದದ ನಕಲಾಗಿದೆ.ನಾಗರಿಕ ಪ್ರದೇಶಗಳಲ್ಲಿನ ಸೇನೆಯ ಪ್ರಮಾಧಿಕಾರವನ್ನು ಹಿಂಪಡೆಯುವುದು, ಎ ಎಫ್ ಎಸ್ ಪಿಎ ಮಾರ್ಪಾಡು ಸೇರಿ ಎಲ್ಲಾ ಅಂಶಗಳೂ ಮುಫ್ತಿ ಹಾಗೂ ಬಿಜೆಪಿ ನಡುವೆ ಆಗಿರುವ ಒಪ್ಪಂದದಲ್ಲಿದ್ದಂತೆಯೇ ಇದೆ." ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT