ಭುವನೇಶ್ವರ: ಬಿಜೆಡಿ ಮಾಜಿ ಶಾಸಕರಿಂದ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯೊಬ್ಬರು ಇಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.
2014 ರಲ್ಲಿ ಬಿಜು ಜನತಾ ದಳ ಎಂಎಲ್ಎ ಶ್ರೀನಾಥ್ ಸೋರನ್ ಗೆ ತಾನು ಕೆಲಸ ಪಡೆದುಕೊಳ್ಳಲಿಕ್ಕಾಗಿ 1 ಲಕ್ಷ ರೂ. ನೀಡಿದ್ದನೆಂದು ಆರೋಪಿಸಿದ ಮಹಿಳೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಕ್ಕೆ ಯತ್ನಿಸಿದ್ದಾರೆ. ಆವೇಳೆ ಭದ್ರತಾ ಸಿಬ್ಬಂದಿಗಳು ಆಕೆಯನ್ನು ತಡೆದು ದೂರ ಕಳಿಸಿದ್ದಾರೆ.
"ಸೊರೆನ್ ಕೆಲಸವನ್ನು ಕೊಡಿಸುವುದಾಗಿ ಮಹಿಳೆಯಿಂದ ಹಣ ಪಡೆಇದ್ದರು, ಆದರೆ ಆ ವಾಗ್ದಾನವನ್ನು ಅವರು ಪೂರೈಸಿರಲಿಲ್ಲ. ಇದರಿಂದ ಬೇಸತ್ತ ಮಹಿಳೆ ಮುಖ್ಯಮಂತ್ರಿ ನಿವಾಸದೆದುರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಅವರ ಆರೋಗ್ಯ ಸ್ಥಿಅವಾಗಿದೆ"ಪೊಲೀಸರು ಹೇಳಿದ್ದಾರೆ.
2014ರಲ್ಲಿ, ಸೊರೆನ್ ಮತ್ತು ಅವರ ಸಹಾಯಕ ಸ್ವರೂಪ್ ದಾಸ್ ಅವರ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪ ದಾಖಲಾಗಿತ್ತು.ಸರ್ಕಾರಿ ಕೆಲಸಕ್ಕಾಗಿ ಸೊರೆನ್ ಗೆ 1 ಲಕ್ಷ ರೂಪಾಯಿ ನೀಡಿರುವುದಾಗಿ ಮಹಿಳೆ ಆರೋಪಿಸಿದ ಬಳಿಕ ಈ ಪ್ರಕರಣ ದಾಖಲಾಗಿದೆ. ಸೊರೆನ್ ತನ್ನ ಭರವಸೆಯನ್ನು ಉಳಿಸಿಕೊಳ್ಳಲು ವಿಫಲವಾದ ಕಾರಣ, ಹಣವನ್ನು ಹಿಂದಿರುಗಿಸಲು ಆಕೆ ಒತ್ತಾಯಿಸಿದ್ದು ಆ ವೇಳೆ ಹಣ ಹಿಂಪಡೆಯಲು ಆಗಮಿಸುವಂತೆ ಹೇಳಿದ್ದ ಮಾಜಿ ಶಾಸಕ ಸೊರೆನ್ ತನ್ನ ಸಹಾಯಕನ ಜತೆ ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರೆಂದು ಆಕೆ ದೂರಿನಲ್ಲಿ ಹೇಳೀದ್ದಾರೆ. .