ರಾಷ್ಟ್ರೀಯತೆ ಅರ್ಥವೇನು? ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಿಯತೆಯನ್ನು ಪ್ರಶ್ನಿಸಿದ ಪ್ರಿಯಾಂಕ ವಾದ್ರ 
ದೇಶ

ರಾಷ್ಟ್ರೀಯತೆ ಅರ್ಥವೇನು? ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಿಯತೆಯನ್ನು ಪ್ರಶ್ನಿಸಿದ ಪ್ರಿಯಾಂಕ ವಾದ್ರ

ರಾಷ್ಟ್ರೀಯತೆಯ ವಿಷಯವಾಗಿ ಎಐಸಿಸಿ ಉಪಾಧ್ಯಕ್ಷೆ ಪ್ರಿಯಾಂಕ ವಾದ್ರ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಅಮೇಥಿ: ರಾಷ್ಟ್ರೀಯತೆಯ ವಿಷಯವಾಗಿ ಎಐಸಿಸಿ ಉಪಾಧ್ಯಕ್ಷೆ ಪ್ರಿಯಾಂಕ ವಾದ್ರ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. 
"ನಾನೂ ಮೋದಿ ಎನ್ನುವುದರಲ್ಲಿ ರಾಷ್ಟ್ರೀಯತೆಗೆ ಯಾವ ಅರ್ಥ ಇದೆ? ರಾಷ್ಟ್ರೀಯತೆ ಎಂದರೆ ಏನು? ಅದು ದೇಶಭಕ್ತಿ, ದೇಶದೆಡೆಗಿನ ಪ್ರೀತಿ. ದೇಶ ಅಂದರೆ ಯಾವುದು? ಜನತೆ ಹಾಗೂ ಅವರ ಪ್ರೀತಿ" ಎಂದು ಪ್ರಿಯಾಂಕ ಗಾಂಧಿ ರಾಷ್ಟ್ರೀಯತೆಯ ಪಾಠ ಮಾಡಿದ್ದಾರೆ. 
ಕೇವಲ ವ್ಯಕ್ತಿಗತ ಆಕರ್ಷಣೆ ಹೊಂದಿದ್ದರೆ, ಇದು ಯಾವ ರೀತಿಯ ರಾಷ್ಟ್ರೀಯತೆ? ಎಂದು ಅಮೇಥಿಯಲ್ಲಿ ಮಾತನಾಡಿರುವ ಪ್ರಿಯಾಂಕ ವಾದ್ರ ಪ್ರಶ್ನಿಸಿದ್ದಾರೆ. 
ಹಣ ಕೊಟ್ಟು ಜನರನ್ನು ಕರೆಸಿ ಭಾಷಣ ಮಾಡುವುದು, ಆ ಮೂಲಕ ಸಂದೇಶ ರವಾನೆ ಮಾಡುವುದು ಸುಲಭ ಆದರೆ ಜನರ ಸಮಸ್ಯೆಯನ್ನು ಪರಿಹರಿಸುವುದು ಮುಖ್ಯ ಎಂದು ಪ್ರಿಯಾಂಕ ವಾದ್ರ ಅಭಿಪ್ರಾಯಪಟ್ಟಿದ್ದಾರೆ. 
ವಾರಾಣಸಿಯ ಒಂದೆ ಒಂದು ಗ್ರಾಮಕ್ಕೂ ಸಹ ಮೋದಿ ಭೇಟಿ ನೀಡಿಲ್ಲ, ಅವರ ಸಮಸ್ಯೆಗಳನ್ನು ಆಲಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT