ದೇಶ

ಟೀ ಮಾರುತ್ತಿದ್ದ ಅವತಾರ್ ಸಿಂಗ್ ಇಂದು ಉತ್ತರ ದೆಹಲಿ ಮೇಯರ್!

Vishwanath S
ನವದೆಹಲಿ: ಬದುಕೋದಕ್ಕೆಂದು ಟೀ ಮಾರುತ್ತಿದ್ದ ವ್ಯಕ್ತಿಯೋರ್ವನನ್ನು ಉತ್ತರ ದೆಹಲಿಯ ಮೇಯರ್ ಆಗಿ ಆಯ್ಕೆ ಮಾಡಲಾಗಿದೆ.
ದಲಿತ ಸಿಖ್ ಸಮುದಾಯಕ್ಕೆ ಸೇರಿದ ಬಿಜೆಪಿ ಕಾರ್ಪೋರೇಟರ್ ಅವತಾರ್ ಸಿಂಗ್ ಮೇಯರ್ ಹುದ್ದೆಗೆ ಏರಿದ ಅಪರೂಪದ ಘಟನೆಯಾಗಿದೆ. ಉತ್ತರ ದೆಹಲಿಯ ಮೇಯರ್ ಸ್ಥಾನಕ್ಕೆ ಅವತಾರ್ ಸಿಂಗ್ ಅವರ ಹೆಸರನ್ನು ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಸೂಚಿಸಿದ್ದರು. 
ಚುನಾವಣೆಯನ್ನು ಉತ್ತರ ದೆಹಲಿ ಪಾಲಿಕೆಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅವತಾರ್ ಸಿಂಗ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
SCROLL FOR NEXT