ದೇಶ

ಮಹಾಭಾರತ ಯುದ್ಧಕ್ಕೆ ಮುನ್ನವೂ ಸಂಧಾನ ಪ್ರಯತ್ನ ನಡೆದಿತ್ತು: ಯೋಗಿ ಆದಿತ್ಯನಾಥ್

Raghavendra Adiga
ಲಖನೌ: ಬಹುದೀರ್ಘಕಾಲದ ಅಯೋಧ್ಯೆ ರಾಮಜನ್ಮಭೂಮಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನಿಂಡ ರಚನೆಯಾಗಿದ್ದ ಸಂಧಾನ ಸಮಿತಿ ಅಂತಿಮ ತೀರ್ಮಾನಕ್ಕೆ ಬರಲು ವಿಫಲವಾಗಿದೆ ಎನ್ನುವುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಚಿತಪಡಿಸಿದ್ದಾರೆ. ಆದರೆ ಮೂವರನ್ನೊಳಗೊಂಡ ಈ ಸಂಧಾನ ಸಮಿತಿಯ ಪ್ರಯತ್ನವನ್ನು ಅವರು ಶ್ಲಾಘಿಸಿದ್ದಾರೆ.
ಹಿಂದೂ ಪುರಾಣ ಮಹಾಭಾರತದ ಉದಾಹರಣೆಯನ್ನು ಹೇ:ಳಿರುವ ಯೋಗಿ "ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗಾಗಿ ಮೂರು ಸದಸ್ಯರ ತಂಡವನ್ನು ರಚಿಸಿತ್ತು. ಅದು ವಿಫಲವಾಗಿದೆ. ಆದರೆ ನನಗೆ ಈ ಮಧ್ಯಸ್ಥಿಕೆಯಿಂದ ಏನೂ ಪ್ರಯೋಜನವಿಲ್ಲ ಎನ್ನುವುದು ತಿಳಿದಿತ್ತು.ಆದರೆ ಈ ಪ್ರಯತ್ನ ಬಹಳ ಒಳ್ಳೆಯದು. ಮಹಾಭಾರತ ಯುದ್ಧಕ್ಕೂ ಮುನ್ನ ಸಹ ಇಂತಹಾ ಒಂದು ಸಂಧಾನ ನಡೆದಿದ್ದು ಅಲ್ಲಿಯೂ ಸಹ ಅದು ಫಲಕಂಡಿರಲಿಲ್ಲ" ಎಂದಿದ್ದಾರೆ.
ಅಯೋಧ್ಯೆ ವಿಷಯದ ಮಧ್ಯಸ್ಥಿಕೆ ಸಮಿತಿಯು ಭೂವಿವಾದ ವಿಚಾರಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ.ಮತ್ತು ಆಗಸ್ಟ್ 6 ರಿಂದ ಈ ಪ್ರಕರಣ ಕುರಿತಂತೆ ಪ್ರತಿನಿತ್ಯ ವಿಚಾರಣೆ ನಡೆಸಲು ತೀರ್ಮಾನಿಸಿದೆ. ಸಂವಿಧಾನ ಪೀಠದ ಮುಖ್ಯಸ್ಥರಾಗಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, "ನಾವು ಮಧ್ಯಸ್ಥಿಕೆ ವರದಿಯನ್ನು ಸ್ವೀಕರಿಸಿದ್ದೇವೆ. ಮಧ್ಯಸ್ಥಿಕೆ ಸಮಿತಿಯು ಯಾವುದೇ ಅಂತಿಮತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಪ್ರಕರಣದ ವಿಚಾರಣೆಯುಆ. 6ರಿಂದ ನಿತ್ಯವೂ ನಡೆಯಲಿದೆ." ಎಂದಿದ್ದಾರೆ.
SCROLL FOR NEXT