ನವದೆಹಲಿ: ಯಾರು ಏನೇ ಮಾಡಿದರೂ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ 370 ಕಲಂ ಅನ್ನು ಕಿತ್ತೋಗೆಯಲು ಸಾಧ್ಯವಿಲ್ಲ ಎಂದುಕೊಂಡಿದ್ದವರಿಗೆ ನಿನ್ನೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶಾಕ್ ನೀಡಿದ್ದು ಆ ಒಂದೇ ಒಂದು ಸಹಿ ಈ ಕಲಂ ಸಮಾಧಿ ಸೇರಿತು.
ಹೌದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಆ ಒಂದು ಸಹಿ ಈ ಕಲಂ ಇತಿಹಾಸದ ಪುಟ ಸೇರುವಂತಾಯಿತು. 370ನೇ ವಿಧಿಯ ಮೂರನೇ ಅಂಶದ - 370(3) ಪ್ರಕಾರ, ರಾಷ್ಟ್ರಪತಿಗಳ ಈ ವಿಧಿ ರದ್ದಾಗಿದೆ ಎಂದು ಘೋಷಿಸುವ ಅಧಿಕಾರವನ್ನು ಹೊಂದಿದ್ದಾರೆ. ಇದಕ್ಕೆ ಜಮ್ಮು ಮತ್ತು ಕಾಶ್ಮೀರದ ಅಸೆಂಬ್ಲಿಯ ಅನುಮತಿ ಬೇಕು ಅಷ್ಟೇ. ಈಗ ಅಲ್ಲಿ ಇರುವುದು ರಾಜ್ಯಪಾಲ ಆಡಳಿತ. ಅದನ್ನೇ ಬಳಸಿಕೊಂಡು ಮೋದಿ-ಶಾ ಕಮಾಲ್ ಮಾಡಿದ್ದಾರೆ.
ವಿಪಕ್ಷಗಳ ಗದ್ದಲದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಂಡಿಸಿದರು. ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಒಳಗೊಂಡಿರುವ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಕ್ ವಿಧಾನಸಭೆ ಒಳಗೊಂಡಿರದ ಕೇಂದ್ರಾಡಳಿತ ಪ್ರದೇಶವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos