ಪ್ರಧಾನ ಮಂತ್ರಿ ನರೇಂದ್ರ ಮೋದಿ 
ದೇಶ

ಪ್ರತಿ 100 ದಿನಗಳಿಗೊಮ್ಮೆ ಸರ್ಕಾರದ ಪ್ರಮುಖ ಯೋಜನೆಗಳ ವರದಿ ಕೊಡಿ: ಪ್ರಧಾನ ಮಂತ್ರಿ ಕಚೇರಿ ಆದೇಶ

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಂದುವರಿಸಲು ಸಂಬಂಧಪಟ್ಟ ಸಚಿವಾಲಯಗಳು ಯೋಜನೆಗಳ ನಿಗದಿತ ವರದಿಗಳನ್ನು ...

ನವದೆಹಲಿ: ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಂದುವರಿಸಲು ಸಂಬಂಧಪಟ್ಟ ಸಚಿವಾಲಯಗಳು ಯೋಜನೆಗಳ ನಿಗದಿತ ವರದಿಗಳನ್ನು ಪ್ರಧಾನ ಮಂತ್ರಿ ಕಚೇರಿಗೆ ಸಲ್ಲಿಸಬೇಕೆಂದು ಆದೇಶ ನೀಡಲಾಗಿದೆ. 
ಯೋಜನೆಗಳನ್ನು ನಿರಂತರವಾಗಿ ನಿಗಾವಹಿಸುವುದು ಮಾತ್ರವಲ್ಲದೆ ಪ್ರಮುಖ ಯೋಜನೆಗಳ ವರದಿ ಕಾರ್ಡುಗಳನ್ನು ಸರ್ಕಾರ 100 ದಿನಗಳೊಳಗೆ ಸಲ್ಲಿಸಲಿದೆ.
ಹಿಂದಿನ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಸಚಿವಾಲಯಗಳ ವರದಿ ಕಾರ್ಡುಗಳನ್ನು ಯೋಜನೆಗಳು ಆರಂಭವಾಗಿ ಒಂದು ವರ್ಷವಾದ ನಂತರ ಸಲ್ಲಿಸಲಾಗುತ್ತಿತ್ತು. ಈ ಬಾರಿಯ ಸರ್ಕಾರದಲ್ಲಿ ಅದನ್ನು ಪ್ರತಿ 100 ದಿನಗಳಿಗೊಮ್ಮೆ ಮಾಡಲಾಗುತ್ತದೆ. ಯೋಜನೆಗಳ ಹೊಸ ಗುರಿಯನ್ನು ಅದರ ಪ್ರಕಾರ ನಿಗದಿಪಡಿಸಿ ಯೋಜನೆಗಳ ವರದಿಗಳನ್ನು ಅಪ್ ಡೇಟ್ ಮಾಡಿ ನಿಗದಿತ ವಿರಾಮಗಳಲ್ಲಿ ವರದಿಗಳನ್ನು ಸಲ್ಲಿಸಲಾಗುತ್ತದೆ. 
ಸರ್ಕಾರದ ಯೋಜನೆಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವತ್ತ ಸರ್ಕಾರ ಒತ್ತು ನೀಡುತ್ತಿದ್ದು, ಸಚಿವಾಲಯಗಳು ಮತ್ತು ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸುವಂತೆ ಹೇಳಲಾಗಿದೆ. ಪ್ರಮುಖ ಯೋಜನೆಗಳು ಏನು, ಎಲ್ಲಿ ಮತ್ತು ಯಾವಾಗ ಎಂದು ವಿವರ ತಯಾರಿಸುವಂತೆ ಹೇಳಲಾಗಿದೆ. ಯೋಜನೆಗಳ ಗುರಿ ಮತ್ತು ಅವಕಾಶ ವಿವರಗಳನ್ನು ವರದಿಗಳಲ್ಲಿ ವಿವರಿಸಿ ಅವುಗಳನ್ನು ಪೂರ್ಣಗೊಳಿಸುವ ಸಂಬಂಧ ಮತ್ತು ಅವುಗಳಿಂದ ಆಗುವ ಪರಿಣಾಮಗಳ ಹಂತಗಳನ್ನು ವರದಿಯಲ್ಲಿ ವಿವರ ನೀಡುವಂತೆ ಸೂಚಿಸಲಾಗಿದೆ.
ಮುಂದಿನ ಕೆಲ ತಿಂಗಳಲ್ಲಿ ಪೂರ್ಣಗೊಳ್ಳುವ ಯೋಜನೆಗಳ ಬಗ್ಗೆ ಕೂಡ ವಿವರ ನೀಡುವಂತೆ ಸಚಿವಾಲಯಗಳಿಗೆ ಸರ್ಕಾರ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ