ದೇಶ

ಕೃಷ್ಣನ ರೀತಿ ಕೊಳಲು ನುಡಿಸಿದರೆ ಹಸುಗಳಿಂದ ಹೆಚ್ಚು ಹಾಲು: ಬಿಜೆಪಿ ನಾಯಕ!

Srinivas Rao BV

ಭಗವಾನ್ ಕೃಷ್ಣನ ರೀತಿಯಲ್ಲಿ ಕೊಳಲು ನುಡಿಸಿದರೆ ಹಸುಗಳು ಹೆಚ್ಚು ಹಾಲು ಕೊಡುತ್ತವೆ ಎಂಬ ತಮ್ಮ ಇತ್ತೀಚಿನ ಹೇಳಿಕೆಯನ್ನು ಬಿಜೆಪಿ ಶಾಸಕ ದಿಲೀಪ್ ಕುಮಾರ್ ಪೌಲ್ ಸಮರ್ಥಿಸಿಕೊಂಡಿದ್ದಾರೆ. 

ತಮ್ಮ ಹೇಳಿಕೆ ಅತಿ ಪ್ರತಿಭಾವಂತ ಸಂಶೋಧನಾ ತಂಡದಿಂದ ಸಾಬೀತಾಗಿದೆ ಎಂದು ಅಸ್ಸಾಂ ನ ಬಿಜೆಪಿ ನಾಯಕ ದಿಲೀಪ್ ಕುಮಾರ್ ಪೌಲ್ ಹೇಳಿದ್ದಾರೆ. 

ಕೃಷ್ಣನ ರೀತಿ ಕೊಳಲು ನುಡಿಸಿದರೆ ಹಸುಗಳಿಂದ ಹೆಚ್ಚು ಹಾಲು ಸಿಗುತ್ತದೆ ಎಂಬ ಹೇಳಿಕೆ ನನ್ನದಲ್ಲ, ಗುಜರಾತ್ ನ ಪ್ರತಿಭಾವಂತ ಸಂಶೋಧನಾ ತಂಡದಿಂದ ಸಾಬೀತಾಗಿರುವ ಸಂಗತಿ, ಭಗವಾನ್ ಕೃಷ್ಣ ಕಾಲಹರಣಕ್ಕಾಗಿ ಕೊಳಲನ್ನು ನುಡಿಸಲಿಲ್ಲ, ಈ ರೀತಿಯ ತಂತ್ರವನ್ನು ಆಧುನಿಕ ಕಾಲದಲ್ಲೂ ಅಳವಡಿಸಿಕೊಳ್ಳಲಿದ್ದೇವೆ ಎಂದು ಸಿಲ್ಚಾರ್ ನ ಬಿಜೆಪಿ ಶಾಸಕ ಹೇಳಿದ್ದಾರೆ. 
 

SCROLL FOR NEXT