ಸಂಗ್ರಹ ಚಿತ್ರ 
ದೇಶ

'ಹೌದು ನಾನು ಕೆಟ್ಟ ಹಣಕಾಸು ಸಚಿವೆ..!'; ರೊಚ್ಚಿಗೆದ್ದ ಸಚಿವೆ ನಿರ್ಮಲಾ ಹೇಳಿದ್ದೇನು..?

ಕೇಂದ್ರ ಸಚಿವ ಅಮಿತ್​ ಶಾಗೆ ಉದ್ಯಮಿ ರಾಹುಲ್​ ಬಜಾಜ್​ ಕೇಳಿದ ಪ್ರಶ್ನೆ ವಿಪಕ್ಷಗಳಿಗೆ ಬ್ರಹ್ಮಾಸ್ತ್ರವಾಗಿ ಮಾರ್ಪಟ್ಟಿದ್ದು, ಈ ಕುರಿತ ಟೀಕೆಗಳಿಗೆ ಕೆಂಡಾಮಂಡಲರಾಗಿರುವ ಕೇಂದ್ರ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.

ನವದೆಹಲಿ: ಕೇಂದ್ರ ಸಚಿವ ಅಮಿತ್​ ಶಾಗೆ ಉದ್ಯಮಿ ರಾಹುಲ್​ ಬಜಾಜ್​ ಕೇಳಿದ ಪ್ರಶ್ನೆ ವಿಪಕ್ಷಗಳಿಗೆ ಬ್ರಹ್ಮಾಸ್ತ್ರವಾಗಿ ಮಾರ್ಪಟ್ಟಿದ್ದು, ಈ ಕುರಿತ ಟೀಕೆಗಳಿಗೆ ಕೆಂಡಾಮಂಡಲರಾಗಿರುವ ಕೇಂದ್ರ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.

ಈ ಕುರಿತಂತೆ ಸಂಸತ್ ನಲ್ಲಿ ಮಾತನಾಡಿದ ನಿರ್ಮಲಾ, ಕೇಂದ್ರ ಸರ್ಕಾರದ ಕುರಿತ ಟೀಕೆಗೆ ಉತ್ತರಿಸಲು ಹಾಗೂ ಅದನ್ನು ಕೇಳಿಸಿಕೊಳ್ಳಲು ನಾವು ಸದಾ ಸಿದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ. 'ರಾಹುಲ್ ಬಜಾಜ್​ ಅವರು ಪ್ರಶ್ನೆ ಕೇಳುವಾಗ ನಾನು ಕೂಡ ವೇದಿಕೆಯಲ್ಲಿದ್ದೆ. ನಾವು ತುಂಬಾ ಖುಷಿಯಿಂದಲೇ ಅವರ ಪ್ರಶ್ನೆ ಹಾಗೂ ಟೀಕೆಗೆ ಉತ್ತರಿಸಿದೆವು. ಅದು ಬಿಟ್ಟು ನೀವು ಮಾತಾಡುವ ಹಂಗಿಲ್ಲ ಅಂತ ನಾವು ಹೇಳಿಲ್ಲವಲ್ಲ. ಅಮಿತ್​ ಶಾ ಅವರು ಕೂಡ ಸರಿಯಾದ ಪ್ರತಿಕ್ರಿಯೆ ನೀಡುವ ಮೂಲಕ ನೀವು ಏನೇ ಪ್ರಶ್ನೆ ಕೇಳಿದರೂ ಖುಷಿಯಿಂದಲೇ ಅದಕ್ಕೆ ಉತ್ತರ ಕೊಡುತ್ತೇವೆ ಎನ್ನುವಂತಿತ್ತು ಎಂದು ಪ್ರಶಂಸಿದರು.

ಅಂತೆಯೇ ಕೆಟ್ಟ ಹಣಕಾಸು ಸಚಿವೆ ಎಂಬ ಟೀಕೆಗಳಿಗೆ ಉತ್ತರಿಸಿದ ನಿರ್ಮಲಾ, 'ಹೌದು.. ನಿಮ್ಮಲ್ಲಿ ನಾನೊಬ್ಬಳು ಕೆಟ್ಟ ಹಣಕಾಸು ಸಚಿವೆ ಅಂತ ಹೇಳಿದ್ದೇನೆ. ನಿಮ್ಮ ಐಡಿಯಾಗಳನ್ನ ಕೊಡಿ, ನಾವು ಈ ಬಗ್ಗೆ ಕೂಡ ಕೆಲಸ ಮಾಡುತ್ತೇವೆ, ನಿಮ್ಮ ಮಾತನ್ನ ಕೂಡ ನಾವು ಕೇಳುತ್ತೇವೆ. ಬೇರೆಯವರ ಮಾತನ್ನ ಮೋದಿ ಸರ್ಕಾರ ಮಾತ್ರ ಕೇಳುತ್ತೆ, ಇನ್ಯಾವ ಪಕ್ಷಗಳೂ ಕೇಳಲ್ಲ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷ ಟೀಕಾ ಪ್ರಹಾರ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

SCROLL FOR NEXT