ದೇಶ

ನಿಮ್ಮ ಹಿಂದುತ್ವ ಶಾಲೆಯ ಹೆಡ್ ಮಾಸ್ಟರ್ ನಾವು: ಬಿಜೆಪಿಗೆ ಶಿವಸೇನೆ ತಿರುಗೇಟು 

Srinivas Rao BV

ನವದೆಹಲಿ: ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿರುವ ಶಿವಸೇನೆ ತನಗೆ ಎಷ್ಟು ದೇಶಭಕ್ತಿ ಇದೆ, ಹಿಂದುತ್ವದ ಬದ್ಧತೆ ಎಷ್ಟಿದೆ ಎಂಬುದನ್ನು ಸಾಬೀತುಪಡಿಸುವ ಅವಶ್ಯಕತೆ ಇಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದೆ. 

ಬಿಜೆಪಿ ನಾಯಕರು ಹಾಜರಾಗುವ ಹಿಂದುತ್ವ ಶಾಲೆಯ ಹೆಡ್ ಮಾಸ್ಟರ್ ಎಂದು ಶಿವಸೇನೆ ತನ್ನನ್ನು ತಾನು ಹೇಳಿದೆ. 

ಮಸೂದೆಯನ್ನು ಬೆಂಬಲಿಸದೇ ಇರುವವರು ದೇಶವಿರೋಧಿಗಳು, ಪಾಕಿಸ್ತಾನದ ಭಾಷೆಯಲ್ಲೇ ಮಾತನಾಡುತ್ತಿದ್ದಾರೆ ಎಂಬ ಹೇಳಿಕೆ ಕೇಳಿಬರುತ್ತಿದೆ. 

ಹಿಂದುತ್ವ ಹಾಗೂ ದೇಶಭಕ್ತಿಯನ್ನು ಸಾಬೀತುಪಡಿಸುವುದಕ್ಕೆ ನಮಗೆ ಪ್ರಮಾಣ ಪತ್ರ ಬೇಕಿಲ್ಲ. ಬಿಜೆಪಿ ನಾಯಕರು ಕಲಿಯುವ ಹಿಂದುತ್ವದ ಹೆಡ್ ಮಾಸ್ಟರ್ ಶಿವಸೇನೆ, ಬಾಳ್ ಠಾಕ್ರೆ, ಅಟಲ್ ಬಿಹಾರಿ ವಾಜಪೇಯಿ, ಶ್ಯಾಮ ಪ್ರಸಾದ್ ಮುಖರ್ಜಿ ಅವರೆಲ್ಲರೂ ನಮ್ಮ ಶಾಲೆಯ ಹೆಡ್ ಮಾಸ್ಟರ್ ಗಳು ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. 
 

SCROLL FOR NEXT