ಸಾಂದರ್ಭಿಕ ಚಿತ್ರ 
ದೇಶ

ಭಾರತೀಯ ನಾಗರಿಕರು ಬ್ಯಾಂಕ್ ಖಾತೆ ತೆರೆಯಲು ಧರ್ಮ ಘೋಷಿಸುವ ಅಗತ್ಯವಿಲ್ಲ- ಹಣಕಾಸು ಸಚಿವಾಲಯ

ಭಾರತೀಯ ನಾಗರಿಕರು ಬ್ಯಾಂಕಿನ ಕೆವೈಸಿ- ಗ್ರಾಹಕರ ಗುರುತು ಹಾಗೂ ಪುರಾವೆಗಳನ್ನು ಖಾತರಿಪಡಿಸಿಕೊಳ್ಳುವಿಕೆಯ  (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಫಾರಂನಲ್ಲಿ ಧರ್ಮವನ್ನು ಘೋಷಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ನವದೆಹಲಿ: ಭಾರತೀಯ ನಾಗರಿಕರು ಬ್ಯಾಂಕಿನ ಕೆವೈಸಿ- ಗ್ರಾಹಕರ ಗುರುತು ಹಾಗೂ ಪುರಾವೆಗಳನ್ನು ಖಾತರಿಪಡಿಸಿಕೊಳ್ಳುವಿಕೆಯ  (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಫಾರಂನಲ್ಲಿ ಧರ್ಮವನ್ನು ಘೋಷಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ಕೆವೈಸಿ ಅಥವಾ ಬ್ಯಾಂಕ್ ಖಾತೆ ತೆರೆಯಲು, ಅಸ್ತಿತ್ವದಲ್ಲಿರುವ ಬ್ಯಾಂಕ್ ಖಾತೆಗೆ ಭಾರತೀಯ ನಾಗರಿಕರು ಧರ್ಮ ಘೋಷಿಸುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯದ  ಹಣಕಾಸು ಸೇವೆ ಇಲಾಖೆ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದಾರೆ.

"ಬ್ಯಾಂಕುಗಳ  ಬಗ್ಗೆಗಿನ ಅಂತಹ ಆಧಾರರಹಿತ ವದಂತಿಗಳಿಗೆ ಒಳಗಾಗಬೇಡಿ ಎಂದು ಅವರು ಹೇಳಿದ್ದಾರೆ. 

ಅನಿವಾಸಿ ಭಾರತೀಯ ಸಾಮಾನ್ಯ ರೂಪಾಯಿ ಖಾತೆಗಳು ( ಎನ್. ಆರ್. ಓ) ಖಾತೆ ತೆರೆಯುವಾಗ  ಫೆಮಾ ಕಾಯ್ದೆಯ ನಿಯಮಗಳಲ್ಲಿನ ಬದಲಾವಣೆಗನುಗುಣವಾಗಿ  ಗ್ರಾಹಕರು ಮತ್ತು ಠೇವಣಿದಾರರು ಕೆವೈಸಿ ಫಾರಂನಲ್ಲಿ ಧರ್ಮದ ವಿವರಗಳನ್ನು ಬ್ಯಾಂಕ್ ಗಳ ಶೀಘ್ರದಲ್ಲಿಯೇ ಪಡೆಯಬಹುದು ಎಂಬ ಮಾಧ್ಯಮಗಳ ವರದಿ ಬೆನ್ನಲ್ಲೇ ಈ ಸ್ಪಷ್ಟೀಕರಣ ನೀಡಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ ಅಮೆರಿಕ ವ್ಯಾಪಾರ ಒಪ್ಪಂದ: 'ಬಹುತೇಕ ಎಲ್ಲ ಸಮಸ್ಯೆಗಳು ಇತ್ಯರ್ಥವಾಗಿವೆ': ಸರ್ಕಾರಿ ಮೂಲಗಳು!

ರಷ್ಯನ್ ತೈಲ: ಆರ್ಥಿಕ ಅವಶ್ಯಕತೆ ಮತ್ತು ಅಮೆರಿಕದ ಒತ್ತಡಗಳ ನಡುವೆ ಸಿಲುಕಿದ ಭಾರತ, ಚೀನಾ (ಜಾಗತಿಕ ಜಗಲಿ)

ನಾವು ಭಾರತೀಯರನ್ನು ನಂಬುತ್ತೇವೆ; ಟ್ರಂಪ್ ನಮಗೆ...: ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಾರಾ ಕೊರಿನಾ ಮಚಾದೊ ಅಚ್ಚರಿ ಹೇಳಿಕೆ

ಗದರಿಸಿದ್ದಕ್ಕೆ ತಾಯಿಯನ್ನು ಕೊಡಲಿಯಿಂದ ಹೊಡೆದು ಕೊಂದ 16 ವರ್ಷದ ಬಾಲಕ!

Pratap Simha vs Pradeep Eshwar: 'ಲೇ ಮಗನೆ.. ನಮ್ಮಪ್ಪನ್ನಂತೂ ನಿಮ್ಮೂರಿಗೆ ಕಳಿಸಲ್ಲ': ಮಿತಿ ಮೀರಿದ ವಾಕ್ಸಮರ, Video

SCROLL FOR NEXT