ಸಾಂದರ್ಭಿಕ ಚಿತ್ರ 
ದೇಶ

ಭಾರತೀಯ ನಾಗರಿಕರು ಬ್ಯಾಂಕ್ ಖಾತೆ ತೆರೆಯಲು ಧರ್ಮ ಘೋಷಿಸುವ ಅಗತ್ಯವಿಲ್ಲ- ಹಣಕಾಸು ಸಚಿವಾಲಯ

ಭಾರತೀಯ ನಾಗರಿಕರು ಬ್ಯಾಂಕಿನ ಕೆವೈಸಿ- ಗ್ರಾಹಕರ ಗುರುತು ಹಾಗೂ ಪುರಾವೆಗಳನ್ನು ಖಾತರಿಪಡಿಸಿಕೊಳ್ಳುವಿಕೆಯ  (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಫಾರಂನಲ್ಲಿ ಧರ್ಮವನ್ನು ಘೋಷಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ನವದೆಹಲಿ: ಭಾರತೀಯ ನಾಗರಿಕರು ಬ್ಯಾಂಕಿನ ಕೆವೈಸಿ- ಗ್ರಾಹಕರ ಗುರುತು ಹಾಗೂ ಪುರಾವೆಗಳನ್ನು ಖಾತರಿಪಡಿಸಿಕೊಳ್ಳುವಿಕೆಯ  (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಫಾರಂನಲ್ಲಿ ಧರ್ಮವನ್ನು ಘೋಷಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ಕೆವೈಸಿ ಅಥವಾ ಬ್ಯಾಂಕ್ ಖಾತೆ ತೆರೆಯಲು, ಅಸ್ತಿತ್ವದಲ್ಲಿರುವ ಬ್ಯಾಂಕ್ ಖಾತೆಗೆ ಭಾರತೀಯ ನಾಗರಿಕರು ಧರ್ಮ ಘೋಷಿಸುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯದ  ಹಣಕಾಸು ಸೇವೆ ಇಲಾಖೆ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದಾರೆ.

"ಬ್ಯಾಂಕುಗಳ  ಬಗ್ಗೆಗಿನ ಅಂತಹ ಆಧಾರರಹಿತ ವದಂತಿಗಳಿಗೆ ಒಳಗಾಗಬೇಡಿ ಎಂದು ಅವರು ಹೇಳಿದ್ದಾರೆ. 

ಅನಿವಾಸಿ ಭಾರತೀಯ ಸಾಮಾನ್ಯ ರೂಪಾಯಿ ಖಾತೆಗಳು ( ಎನ್. ಆರ್. ಓ) ಖಾತೆ ತೆರೆಯುವಾಗ  ಫೆಮಾ ಕಾಯ್ದೆಯ ನಿಯಮಗಳಲ್ಲಿನ ಬದಲಾವಣೆಗನುಗುಣವಾಗಿ  ಗ್ರಾಹಕರು ಮತ್ತು ಠೇವಣಿದಾರರು ಕೆವೈಸಿ ಫಾರಂನಲ್ಲಿ ಧರ್ಮದ ವಿವರಗಳನ್ನು ಬ್ಯಾಂಕ್ ಗಳ ಶೀಘ್ರದಲ್ಲಿಯೇ ಪಡೆಯಬಹುದು ಎಂಬ ಮಾಧ್ಯಮಗಳ ವರದಿ ಬೆನ್ನಲ್ಲೇ ಈ ಸ್ಪಷ್ಟೀಕರಣ ನೀಡಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಿಳಾ ಅಧಿಕಾರಿಗೆ ಧಮ್ಕಿ: ಕಾಂಗ್ರೆಸ್ ನಿಂದ ರಾಜೀವ್ ಗೌಡ ಅಮಾನತು

ರಾಜ್ಯಪಾಲರಿಗೆ ಅವಮಾನ: ಬಿಕೆ ಹರಿಪ್ರಸಾದ್​​ ಅಮಾನತಿಗೆ ಬಿಜೆಪಿ ಪಟ್ಟು; ಪರಿಷತ್ ರಣಾಂಗಣ

ಮಹಾರಾಷ್ಟ್ರ ರಾಜಕಾರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್! BMC ಯಲ್ಲಿ ಬದ್ಧ- ವೈರಿಗಳು ಒಂದಾಗುವ ಸಾಧ್ಯತೆ?

'2 ನಾಲಿಗೆಯ ಗೋಸುಂಬೆ ಸಿದ್ದರಾಮಯ್ಯ'; ಹಳೇ ವಿಡಿಯೋ ಟ್ವೀಟ್ ಮಾಡಿ JDS ಕಿಡಿ!

ರಾಜ್ಯದಲ್ಲಿ 2,500 ಕೋಟಿ ಅಬಕಾರಿ ಹಗರಣ: ಸಚಿವ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಆಗ್ರಹ

SCROLL FOR NEXT