ಕೋಲ್ಕತ್ತಾ ರ್ಯಾಲಿ ಹಿನ್ನೆಲೆ ಪ್ರತಿ ಪ್ರಮೆಗಳಿಗೂ ಕಾವಲುಗಾರನನ್ನು ನೇಮಿಸಲಿರುವ ಬಿಜೆಪಿ! 
ದೇಶ

ಕೋಲ್ಕತ್ತಾ ರ್ಯಾಲಿ ಹಿನ್ನೆಲೆ ಪ್ರತಿ ಪ್ರಮೆಗಳಿಗೂ ಕಾವಲುಗಾರನನ್ನು ನೇಮಿಸಲಿರುವ ಬಿಜೆಪಿ! 

ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ವಿರೂಪಗೊಳಿಸಿದ ಘಟನೆ ನಡೆದ ನಂತರ ಬಿಜೆಪಿ ಕೋಲ್ಕತ್ತಾದಲ್ಲಿ ನಡೆಯಲಿರುವ ರ್ಯಾಲಿ ಹಿನ್ನೆಲೆಯಲ್ಲಿ ಪ್ರತಿ ಪ್ರತಿಮೆಗಳಿಗೂ ಓರ್ವ ಕಾವಲುಗಾರನನ್ನು ನಿಯೋಜನೆ ಮಾಡಿದೆ. 

ಕೋಲ್ಕತ್ತಾ: ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ವಿರೂಪಗೊಳಿಸಿದ ಘಟನೆ ನಡೆದ ನಂತರ ಬಿಜೆಪಿ ಕೋಲ್ಕತ್ತಾದಲ್ಲಿ ನಡೆಯಲಿರುವ ರ್ಯಾಲಿ ಹಿನ್ನೆಲೆಯಲ್ಲಿ ಪ್ರತಿ ಪ್ರತಿಮೆಗಳಿಗೂ ಓರ್ವ ಕಾವಲುಗಾರನನ್ನು ನಿಯೋಜನೆ ಮಾಡಿದೆ. 

ಪಶ್ಚಿಮ ಬಂಗಾಳದ ಐತಿಹಾಸಿಕ ಪ್ರತಿಮೆಗಳಿಗೆ ಬಿಜೆಪಿ ಒಟ್ಟು 200 ಕಾವಲುಗಾರರನ್ನು ನಿಯೋಜನೆ ಮಾಡಿದೆ. ಸುಮಾರು 85 ವಾಕಿ ಟಾಕಿಗಳನ್ನು ಕಾವಲು ಕಾರ್ಯಕರ್ತರಿಗೆ ನೀಡಲಾಗಿದ್ದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಿಯಂತ್ರಣವಾಗಲಿದೆ. 

ಕಳೆದ ಬಾರಿ ಅಮಿತ್ ಶಾ ಅವರ ರೋಡ್ ಶೋ ವೇಳೆ ಈಶ್ವರ್ ಚಂದ್ರ ವಿದ್ಯಾಸಾಗರ್ ಪ್ರತಿಮೆ ವಿರೂಪಗೊಂಡ ನಂತರ ಬಿಜೆಪಿ ಈ ಬಾರಿ ಪ್ರತಿಮೆಗಳನ್ನು ರಕ್ಷಿಸಲು ತಾನೇ ಮುಂದಾಗಿದೆ. 

ಕಳೆದ ಬಾರಿ ನಡೆದ ಪ್ರತಿಮೆ ವಿರೂಪದ ಘಟನೆಗೆ ಟಿಎಂಸಿ ಕಾರ್ಯಕರ್ತರ ಪಡೆ ಕಾರಣ, ಆದ್ದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಬ್ಯಾನರ್ಜಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT