ದೇಶ

ಬಿಹಾರ: ಲಾಠಿ ಚಾರ್ಜ್ ವೇಳೆ ಮಾಜಿ ಕೇಂದ್ರ ಸಚಿವ ಕುಶ್ವಾಹಗೆ ಗಾಯ

Srinivas Rao BV
ಪಾಟ್ನಾ: ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ನಲ್ಲಿ ಮಾಜಿ ಕೇಂದ್ರ ಸಚಿವ ಕುಶ್ವಾಹ ಹಾಗೂ ಅವರ ಪಕ್ಷ ಆರ್ ಎಲ್ಎಸ್ ಪಿ ಕಾರ್ಯಕರ್ತರಿಗೆ  ಗಾಯಗಳುಂಟಾಗಿರುವ ಘಟನೆ ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆದಿದೆ. 
ಬಿಹಾರದಲ್ಲಿ ಶಾಲೆ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಆರ್ ಎಲ್ಎಸ್ ಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಆರ್ ಎಲ್ಎಸ್ ಪಿ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ. 
ಲಾಠಿ ಚಾರ್ಜ್ ನಲ್ಲಿ ಕುಶ್ವಾಹ ಅವರ ತಲೆ ಹಾಗೂ ಕಲುಗಳಿಗೆ ತೀವ್ರವಾದ ಗಾಯಗಳುಂಟಾಗಿ ಪ್ರಾಥಮಿಕ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಪಕ್ಷದ ವಕ್ತಾರ ಮಾಧವ್ ಆನಂದ್ ಹೇಳಿಕೆ ನೀಡಿದ್ದಾರೆ. 
ಪ್ರತಿಭಟನೆ ವೇಳೆ ಪೊಲೀಸರು ಕುಶ್ವಾಹ ಅವರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದಾರೆ ಎಂದು ಸೂಕ್ತ ಭದ್ರತೆ ಒದಗಿಸದ ಸಿಎಂ ನಿತೀಶ್ ಕುಮಾರ್ ವಿರುದ್ಧ ಪಕ್ಷದ ವಕ್ತಾರ ಮಾಧವ್ ಆನಂದ್ ಆರೋಪಿಸಿದ್ದಾರೆ. 
SCROLL FOR NEXT