ಜಾರ್ಖಂಡ್: ರಕ್ತ ನೀಡಿ ಎನ್ ಕೌಂಟರ್ ನಲ್ಲಿ ಗಾಯಗೊಂಡ ನಕ್ಸಲ್ ಜೀವ ಉಳಿಸಿದ ಯೋಧ! 
ದೇಶ

ಜಾರ್ಖಂಡ್: ರಕ್ತ ನೀಡಿ ಎನ್ ಕೌಂಟರ್ ನಲ್ಲಿ ಗಾಯಗೊಂಡ ನಕ್ಸಲ್ ಜೀವ ಉಳಿಸಿದ ಯೋಧ!

ನಕ್ಸಲ್ ಓರ್ವನಿಗೆ ರಕ್ತದಾನ ಮಾಡಿ ಜೀವ ಉಳಿಸುವ ಮೂಲಕ ಸಿಆರ್ ಪಿಎಫ್ ಯೋಧನೊಬ್ಬ ಮಾನವೀಯತೆ ಮೆರೆದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ರಾಂಚಿ: ನಕ್ಸಲ್ ಓರ್ವನಿಗೆ ರಕ್ತದಾನ ಮಾಡಿ ಜೀವ ಉಳಿಸುವ ಮೂಲಕ ಸಿಆರ್ ಪಿಎಫ್ ಯೋಧನೊಬ್ಬ ಮಾನವೀಯತೆ ಮೆರೆದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಸಿಆರ್ ಪಿಎಫ್ 133 ಬೆಟಾಲಿಯನ್ ಯೋಧ ರಾಜ್ ಕಮಲ್ ನಕ್ಸಲ್ ವಿರೋಧಿ ಘಟಕ ಕೋಬ್ರಾ ನಡೆಸಿದ್ದ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ನಕ್ಸಲ್ ನಿಗೆ ರಕ್ತ ನೀಡಿ ಜೀವ ಕಾಪಾಡಿದ್ದಾರೆ.
ಜಾರ್ಖಂಡ್ ನ ಖುಂತಿ ಹಾಗೂ ವೆಸ್ಟ್ ಸಿಂಗ್ ಭೂಮ್ ಜಿಲ್ಲಾ ಗಡಿಯಲಿ 209 ಕೋಬ್ರಾ ಪಡೆ ಜನವರಿ 29ರೆಂದು ನಡೆಸಿದ್ದ ಎನ್ ಕೌಂಟರ್ ನಲ್ಲಿ ಈ ನಕ್ಸಲ್ ಗೆ ಗಾಯವಾಗಿತ್ತು.ಆ ವೇಳೆ ಭದ್ರತಾ ಪಡೆಯ ಯೋಧರೇ ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಎನ್ ಕೌಂಟರ್ ವೇಳೆ ಐವರು ನಕ್ಸಲರು ಸತ್ತಿದ್ದರೆ ಇಬ್ಬರು ನಕ್ಸಲರು ಗಾಯಗೊಂಡಿದ್ದರು.ಎರಡು ಎಕೆ 47, ಎರಡು 303 ರೈಫಲ್ಸ್, ಐದು ಪಿಸ್ತೂಲ್ ಗಳನ್ನು ಭದ್ರತಾ ಪಡೆ ವಶಕ್ಕೆ ಪಡೆದಿತ್ತು.
"ಸೋಮವಾರ ನನಗೆ ಆಸ್ಪತ್ರೆಯಿಂದ ಕರೆ ಬಂದಿತ್ತು. ನಕ್ಸಲ್ ಗೆ ಬಿ ಪಸಿಟಿವ್ ಗುಂಪಿನ ರಕ್ತದ ಅವಶ್ಯಕತೆ ಇದೆ ಎನ್ನಲಾಗಿತ್ತು. ಆಗ ನಮ್ಮ ಕಾನ್ಸ್ಟೇಬಲ್ ರಾಜ್ ಕಮಲ್ ಸ್ವಯಂಪ್ರೇರಣೆಯಿಂದ ರಕ್ತ ನೀಡಿದ್ದಾರೆ" ಜಾರ್ಖಂಡ್ ವಲಯ ಸಿಆರ್ ಪಿಎಫ್ ಐಜಿಪಿ ಸಂಜಯ್ ಆನಂದಂ ಲತ್ಕರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

207 ಮೀಟರ್ ಎತ್ತರಕ್ಕೆ ಉಕ್ಕಿದ ಯಮುನೆ; ದೆಹಲಿಯ ತಗ್ಗು ಪ್ರದೇಶ, ಮಾರುಕಟ್ಟೆಗಳು ಜಲಾವೃತ

ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ?: ಹಾಸಿಗೆ, ದಿಂಬು ಬೇಡಿಕೆ ತೀರ್ಪು ಸೆ.9ಕ್ಕೆ ಕಾಯ್ದಿರಿಸಿದ ಕೋರ್ಟ್!

VIKRAM-32: ಭಾರತದ ಹೊಸ ಬಾಹ್ಯಾಕಾಶ ದರ್ಜೆಯ ಮೈಕ್ರೋಪ್ರೊಸೆಸರ್; Microchip ಮಹತ್ವ, ವಿಶೇಷತೆ ಏನು? ಇಲ್ಲಿದೆ ಮಾಹಿತಿ!

'DNA ಕಳ್ಳತನ' ಭೀತಿ.. ಚೀನಾದಲ್ಲಿ ಸರ್ವಾಧಿಕಾರಿ Kim Jong-un ಮುಟ್ಟಿದ ಎಲ್ಲ ವಸ್ತುಗಳ ಸ್ವಚ್ಛಗೊಳಿಸಿದ ಸಿಬ್ಬಂದಿ, ಕಾರಣ ಏನು? video

7 ವರ್ಷದ ಹಿಂದೆ ವ್ಯಕ್ತಿ ನಾಪತ್ತೆ: ಹೊಸ ಪತ್ನಿ ಜೊತೆಗಿನ Video ನೋಡಿ ಹಳೇ ಪತ್ನಿ ಶಾಕ್; Instagram Reels ನಿಂದ ಸಿಕ್ಕಿಬಿದ್ದ ರೋಚಕ ಕಥೆ!

SCROLL FOR NEXT