ದೇಶ

ಚೆನ್ನೈ: ಕಸದ ತೊಟ್ಟಿಯಲ್ಲಿ ಮಹಿಳೆಯ ಶವದ ಅವಯವ ಪತ್ತೆ, ಸಹಾಯಕ ನಿರ್ದೇಶಕ ಬಂಧನ

Sumana Upadhyaya

ಚೆನ್ನೈ: ಸಹಾಯಕ ನಿರ್ದೇಶಕರೊಬ್ಬರ ಪತ್ನಿಯ ಶವದ ಅವಯವಗಳು ಕಸದ ಟ್ರಕ್ ನಲ್ಲಿ ಕಂಡುಬಂದ ಘಟನೆ ಚೆನ್ನೈ ನಗರ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆ ಅಸುನೀಗಿ 16 ದಿನಗಳ ನಂತರ ಶರೀರದ ಅವಯವಗಳು ಕಸದ ತೊಟ್ಟಿಯಲ್ಲಿ ಸಿಕ್ಕಿವೆ.

ಈ ಆಘಾತಕಾರಿ ಘಟನೆ ಬೆಳಕಿಗೆ ಬಂದದ್ದು ಜನವರಿ 20ರಂದು, ಕಸವನ್ನು ಸಾಗಿಸುವ ಕೂಲಿ ಕಾರ್ಮಿಕರು ಚೆನ್ನೈ ನಗರಪಾಲಿಕೆ ವ್ಯಾಪ್ತಿಯ ಪೆರುಂಗುಡಿ ಕಸದ ರಾಶಿ ತೊಟ್ಟಿಯಲ್ಲಿ ಕಸ ಹಾಕುವಾಗ ಮಹಿಳೆಯ ಮೃತದೇಹದ ಅವಯವಗಳು ಸಿಕ್ಕಿವೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಆರಂಭದಲ್ಲಿ ಪೊಲೀಸರಿಗೆ ಮಹಿಳೆ ಯಾರೆಂದು ಗೊತ್ತಾಗಲಿಲ್ಲ. ಸಾರ್ವಜನಿಕರಿಂದ ಮಾಹಿತಿ ಕೇಳಿದ್ದರು.

ನಿನ್ನೆ ಪೊಲೀಸರಿಗೆ ಮಹಿಳೆ ಸಂಧ್ಯಾ ಎಂದು ಸಹಾಯಕ ನಿರ್ದೇಶಕ ಬಾಲಕೃಷ್ಣ ಅವರ ಪತ್ನಿ ಎಂದು ಗೊತ್ತಾಗಿದೆ. ಪತಿ-ಪತ್ನಿಯ ಮಧ್ಯೆ ಹೊಂದಾಣಿಕೆ ಇಲ್ಲದೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ವಿಚಾರಣೆ ನಡೆಯುತ್ತಿತ್ತು.

ಸಹಾಯಕ ನಿರ್ದೇಶಕ ಬಾಲಕೃಷ್ಣ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತೂತುಕುಡಿ ಮೂಲದ ಸಂಧ್ಯಾ ಈ ಹಿಂದೆ ಚೆನ್ನೈನ ಜಫ್ಫರ್ ಖಾನ್ ಪೇಟೆಯಲ್ಲಿ ವಾಸವಾಗಿದ್ದರು. ಕೊಡ್ಡಂಬಕ್ಕಮ್ ಪ್ರದೇಶದಿಂದ ಸಂಗ್ರಹಿಸಿದ ಕಸದಲ್ಲಿ ಮಹಿಳೆಯ ಶವದ ಅವಯವಗಳು ಸಿಕ್ಕಿದ್ದವು.

ಪೊಲೀಸರ ಬಳಿ ದಾಖಲಾಗಿದ್ದ ಕಾಣೆಯಾದ ಮಹಿಳೆಯ ದೂರನ್ನು ಆಧರಿಸಿ ಮೃತ ಮಹಿಳೆಯ ಅವಯವವನ್ನು ಪೊಲೀಸರು ಗುರುತುಹಿಡಿದಿದ್ದಾರೆ. 

SCROLL FOR NEXT