ದೇಶ

ಕೇಂದ್ರ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಅಮೋಲ್ ಪಾಲೇಕರ್ ಭಾಷಣಕ್ಕೆ ಪದೇ ಪದೇ ಅಡ್ಡಿ

Nagaraja AB
ಮುಂಬೈ: ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಹಿರಿಯ ನಟ, ನಿರ್ದೇಶಕ ಅಮೋಲ್  ಪಾಲೇಕರ್ ಭಾಷಣಕ್ಕೆ ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯ ಕೆಲ ಸದಸ್ಯರು ಪದೇ ಪದೇ  ಅಡ್ಡಿಪಡಿಸಿರುವ ಘಟನೆ ನಡೆದಿದೆ.
ಖ್ಯಾತ ಕಲಾವಿದ ಪ್ರಭಾಕರ್ ಬಾರ್ವೆ ಸ್ಮರಣೆಯ ಹಿನ್ನೆಯಲ್ಲಿ ಆಯೋಜಿಸಿದ್ದ  ಪ್ರದರ್ಶನದ ಆರಂಭದಲ್ಲಿ ಅಮೋಲ್ ಪಾಲೇಕರ್ ಮಾತನಾಡುವಾಗ ಈ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಆಧುನಿಕ ಕಲಾ ಗ್ಯಾರಿಯ ಕೆಲ ಸದಸ್ಯರು ವೇದಿಕೆ ಮೇಲೆರಿ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. ಪಾಲೇಕರ್  ಕಾರ್ಯಕ್ರಮದ ಬಗ್ಗೆ ಮಾತನಾಡುವಂತೆ ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪಾಲೇಕರ್ , ಅದನ್ನೇ ನಾನು ಮಾತನಾಡುತ್ತಿದ್ದು, ಅದನ್ನು ನಿರ್ಬಂಧಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.  ಸ್ಥಳೀಯ ಕಲಾವಿದರ ಸಮಿತಿ ರದ್ದುಗೊಳಿಸಿದ ನಂತರ ದೆಹಲಿಯ ಸಂಸ್ಕೃತಿ ಸಚಿವಾಲಯ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
SCROLL FOR NEXT