ಪ್ರಿಯಾಂಕಾ ವಾದ್ರಾ ಮತ್ತು ರಾಬರ್ಟ್ ವಾದ್ರಾ( ಸಂಗ್ರಹ ಚಿತ್ರ) 
ದೇಶ

ಬಿಕಾನೇರ್ ಭೂಹಗರಣ: ಪತ್ನಿ ಪ್ರಿಯಾಂಕಾ ಜೊತೆ ಇ.ಡಿ ಕಚೇರಿಗೆ ಆಗಮಿಸಿದ ರಾಬರ್ಟ್ ವಾದ್ರಾ

ಬಿಕಾನೇರ್ ಭೂ ಹಗರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾವ ರಾಬರ್ಟ್ ವಾದ್ರಾ ಜೈಪುರದ ಜಾರಿ ನಿರ್ದೇಶನಾಲಯ ಕಚೇರಿಗೆ ತಮ್ಮ ....

ಜೈಪುರ: ಬಿಕಾನೇರ್ ಭೂ ಹಗರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾವ ರಾಬರ್ಟ್ ವಾದ್ರಾ ಜೈಪುರದ ಜಾರಿ ನಿರ್ದೇಶನಾಲಯ ಕಚೇರಿಗೆ ತಮ್ಮ ತಾಯಿ ಜೊತೆ ಹಾಜರಾದರು. 
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ನಿ ಪ್ರಿಯಾಂಕಾ ಗಾಂಧಿ ಅವರು ರಾಬರ್ಟ್‌ ವಾದ್ರಾ ಜತೆ ಇಡಿ ಕಾರ್ಯಾಲಯದ ವರೆಗೆ ಆಗಮಿಸಿದರು. 
ಜಾರಿ ನಿರ್ದೇಶನಾಲಯದ ಎದುರು ವಾದ್ರಾ ತನಿಖೆಗೆ ಹಾಜರಾಗುತ್ತಿರುವುದು ನಾಲ್ಕನೇ ಬಾರಿ ಮತ್ತು ಜೈಪುರದಲ್ಲಿ ಮೊದಲನೇ ಬಾರಿ ಯಾಗಿದೆ. 
ಭೂ ಕಬಳಿಕೆ ಹಗರಣದ ತನಿಖೆ ಸಂಬಂಧ ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳಕೂಡದೆಂದು ವಿನಂತಿಸಿಕೊಂಡದ್ದನ್ನು ಪರಿಗಣಿಸಿದ್ದ ರಾಜಸ್ಥಾನ ಹೈಕೋರ್ಟ್‌, ಜೈಪುರದಲ್ಲಿನ ಇಡಿ ಕಾರ್ಯಾಲಯದಲ್ಲಿ ತನಿಖೆಗೆ ಹಾಜರಾಗಿ ಸಹಕರಿಸುವಂತೆ ರಾಬರ್ಟ್‌ ವಾದ್ರಾ ಮತ್ತು ಆತನ ತಾಯಿಗೆ ಸೂಚಿಸಿತ್ತು. 
ಅದರಂತೆ ರಾಬರ್ಟ್ ವಾದ್ರ ತಮ್ಮ ತಾಯಿಯನ್ನು ಕೂಡ ಇಡಿ ಕಚೇರಿಗೆ ಕರೆ ತಂದಿದ್ದರು, ಇನ್ನೂ ಹಿರಿಯ ನಾಗರಿಕರಿಗೆ ಮೋದಿ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ರಾಬರ್ಟ್ ವಾದ್ರಾ  ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಪತನ: ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ; BJP ಹೋರಾಟಕ್ಕೆ ಜಯ!

ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ; ಬನ್ನಿ ಅಖಾಡಕ್ಕೆ, ಬಳ್ಳಾರಿಯಲ್ಲಿ ನೀವು ರಿಜೆಕ್ಟ್ ಪೀಸ್‌ಗಳು: ರಾಮುಲು, ರೆಡ್ಡಿಗೆ ನಾಗೇಂದ್ರ ಸವಾಲು

ಹೂಡಿಕೆ ಆಕರ್ಷಣೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ: ಕೈಗಾರಿಕಾ ಅಭಿವೃದ್ಧಿಗೆ 5 ನಗರಗಳನ್ನು ಗುರುತಿಸಲು ಅಧಿಕಾರಿಗಳಿಗೆ CM DK Shivakumar ನಿರ್ದೇಶನ

ವಾಲ್ಮೀಕಿ ಹಗರಣದ 'ಕಿಂಗ್ ಪಿನ್' ನಾಗೇಂದ್ರ ಔಟ್: ಜನಾಕ್ರೋಶದ ಮುಂದೆ ಮಂಡಿಯೂರಿ ಶರಣಾದ ಭ್ರಷ್ಟ ಕಾಂಗ್ರೆಸ್ ಸರ್ಕಾರ! ಬಿಜೆಪಿ

ನೇಪಾಳದಲ್ಲಿ ದಿಢೀರ್ ಪ್ರವಾಹ: ಬಲಿಯಾದವರ ಸಂಖ್ಯೆ 538ಕ್ಕೆ ಏರಿಕೆ; 320 ಭಾರತೀಯ ಪ್ರವಾಸಿಗರು ನಾಪತ್ತೆ!