ನವದೆಹಲಿ: ವ್ಯಾಲೆಂಟೈನ್ಸ್ ಡೇ ಅನ್ನು ಶಾಂತಿಯುತವಾಗಿ ಆಚರಿಸಿಬೇಕೆಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಕರೆ ನೀಡಿದ್ದಾರೆ.
ಇದೇ ವೇಳೆ ಪ್ರೇಮಿಗಳ ದಿನಾಚರಣೆ ಆಚರಿಸುವಾಗ ಸಂಘಪರಿವಾರ ವ್ಯಕ್ತಿಗಳು ಪ್ರೇಮಿಗಳನ್ನು ಟಾರ್ಗೆಟ್ ಮಾಡಿದರೇ, ನಾವು ಪುರಾತನ ಆಚರಣೆಯಾದ ಕಾಮದೇವ ದಿವಸವನ್ನು ಆಚರಿಸುತ್ತಿರುವುದಾಗಿ ಹೇಳಬೇಕೆಂದು ಶಶಿ ತರೂರ್ ಪ್ರೇಮಿಗಳಿಗೆ ಸಲಹೆ ನೀಡಿದ್ದಾರೆ.
ಶಶಿ ತರೂರ್ ಅವರು ಪ್ರೇಮಿಗಳಿಗೆ ನೀಡಿರುವ ಸಲಹೆಗೆ ಟಾಂಗ್ ನೀಡಿರುವ ಬಿಜೆಪಿ, ಶಶಿ ತರೂರ್ ಅವರನ್ನು ಲವ್ ಗುರು ಎಂದು ಕರೆದಿದ್ದಾರೆ, ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಮುಖಂಡ ಮುಕ್ತಾರ್ ಅಬ್ಬಾಸ್ ನಕ್ವಿ, ತರೂರ್ ಲವ್ ಗುರು ಆಗಿದ್ದಾರೆ, ಒಂದು ವೇಳೆ ಪ್ರೇಮಿಗಳ ದಿನಾಚರಣೆ ಆಚರಿಸಲು ಯಾರಾದರೂ ವಿರೋಧಿಸಿದರೇ ಅಂತವರ ವಿರುದ್ಧ ತರೂರ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ದೇಶಾದ್ಯಂತ ಪ್ರೇಮಿಗಳ ದಿನಾಚರಣೆ ಆಚರಿಸಲು ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷದ್ ನಾಯಕರು ವಿರೋಧ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos