ಪಂಕಜ್ ತ್ರಿಪಾಠಿ 
ದೇಶ

ರಜೆ ಮುಗಿಸಿ ಹೋದ ಮೂರು ದಿನಗಳಲ್ಲೇ ಪಾರ್ಥಿವ ಶರೀರದ ನಿರೀಕ್ಷೆಯಲ್ಲಿ ಹುತಾತ್ಮ ಯೋಧನ ಕುಟುಂಬ

ಪುಲ್ವಾಮಾ ದಾಳಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪಂಕಜ್ ತ್ರಿಪಾಠಿ, ತನ್ನ ಸ್ವಗ್ರಾಮಕ್ಕೆ ಆಗಮಿಸಿ ಪತ್ನಿ ರೋಹಿಣಿ ಹಾಗೂ ಮೂರು ವರ್ಷದ ಮಗನ ಜೊತೆಗೆ ಸಂತಸದಿಂದ ಎರಡು ತಿಂಗಳ ರಜೆ ಕಳೆದಿದ್ದರು.

ಗೋರಖ್ ಪುರ: ಪುಲ್ವಾಮಾ ದಾಳಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪಂಕಜ್ ತ್ರಿಪಾಠಿ, ತನ್ನ ಸ್ವಗ್ರಾಮಕ್ಕೆ ಆಗಮಿಸಿ ಪತ್ನಿ ರೋಹಿಣಿ ಹಾಗೂ ಮೂರು  ವರ್ಷದ ಮಗನ ಜೊತೆಗೆ ಸಂತಸದಿಂದ ಎರಡು ತಿಂಗಳ ರಜೆ ಕಳೆದಿದ್ದರು.
ಆದರೆ, ರಜೆ ಮುಗಿಸಿ ಕೇವಲ ಮೂರು ದಿನವಾಗಿತ್ತಷ್ಟೇ. ಈಗ ಕುಟುಂಬ ಸದಸ್ಯರು ಹುತಾತ್ಮ ಯೋಧನ ಪಾರ್ಥಿವ ಶರೀರಕ್ಕೆ ಕಾಯುವಂತಾಗಿದೆ.
ಸೇನೆಯ ಅಧಿಕಾರಿಗಳು ಪೋನ್ ಮೂಲಕ ಈ ವಿಷಯ ತಿಳಿಸಿದಾಗ ನನ್ನ ಮಗ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ ಎಂದು ಹೆಮ್ಮೆ ಉಂಟಾಯಿತು. ಆದರೆ, ಸರ್ಕಾರ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹುತಾತ್ಮ ಯೋಧನ ತಂದೆ ಓಂ ಪ್ರಕಾಶ್  ಒತ್ತಾಯಿಸಿದರಲ್ಲದೇ, ಇದು ಸೇಡು ತೀರಿಸಿಕೊಳ್ಳಲು ಸೂಕ್ತ ಸಮಯ ಎಂದರು.
ಪಂಕಜ್ ತ್ರಿಪಾಠಿ ಕಾಶ್ಮೀರಕ್ಕೆ ತೆರಳುವ ಮುನ್ನ  ಎರಡು ತಿಂಗಳು ಕುಟುಂಬದೊಂದಿಗೆ ಕಾಲ ಕಳೆದಿದ್ದರು ಎಂದು ಅವರು ಹೇಳಿದರು.ಗ್ರಾಮದಲ್ಲಿನ ಅನೇಕ ಕುಟುಂಬಗಳಲ್ಲಿ ಇಂದು ಬೆಳಗ್ಗೆಯಿಂದ ಅಡುಗೆ ಮಾಡಿಲ್ಲ ಎಂದು ಗ್ರಾಮಸ್ಥರು ಹೇಳಿದರು.
ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಗ್ರಾಮಸ್ಥರು ಬೀದಿಯಲ್ಲಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪಂಕಜ್ ಅಮರ್ ರಹೇ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲ ಗೆಹ್ಲೋಟ್!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!