ಪಂಕಜ್ ತ್ರಿಪಾಠಿ 
ದೇಶ

ರಜೆ ಮುಗಿಸಿ ಹೋದ ಮೂರು ದಿನಗಳಲ್ಲೇ ಪಾರ್ಥಿವ ಶರೀರದ ನಿರೀಕ್ಷೆಯಲ್ಲಿ ಹುತಾತ್ಮ ಯೋಧನ ಕುಟುಂಬ

ಪುಲ್ವಾಮಾ ದಾಳಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪಂಕಜ್ ತ್ರಿಪಾಠಿ, ತನ್ನ ಸ್ವಗ್ರಾಮಕ್ಕೆ ಆಗಮಿಸಿ ಪತ್ನಿ ರೋಹಿಣಿ ಹಾಗೂ ಮೂರು ವರ್ಷದ ಮಗನ ಜೊತೆಗೆ ಸಂತಸದಿಂದ ಎರಡು ತಿಂಗಳ ರಜೆ ಕಳೆದಿದ್ದರು.

ಗೋರಖ್ ಪುರ: ಪುಲ್ವಾಮಾ ದಾಳಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪಂಕಜ್ ತ್ರಿಪಾಠಿ, ತನ್ನ ಸ್ವಗ್ರಾಮಕ್ಕೆ ಆಗಮಿಸಿ ಪತ್ನಿ ರೋಹಿಣಿ ಹಾಗೂ ಮೂರು  ವರ್ಷದ ಮಗನ ಜೊತೆಗೆ ಸಂತಸದಿಂದ ಎರಡು ತಿಂಗಳ ರಜೆ ಕಳೆದಿದ್ದರು.
ಆದರೆ, ರಜೆ ಮುಗಿಸಿ ಕೇವಲ ಮೂರು ದಿನವಾಗಿತ್ತಷ್ಟೇ. ಈಗ ಕುಟುಂಬ ಸದಸ್ಯರು ಹುತಾತ್ಮ ಯೋಧನ ಪಾರ್ಥಿವ ಶರೀರಕ್ಕೆ ಕಾಯುವಂತಾಗಿದೆ.
ಸೇನೆಯ ಅಧಿಕಾರಿಗಳು ಪೋನ್ ಮೂಲಕ ಈ ವಿಷಯ ತಿಳಿಸಿದಾಗ ನನ್ನ ಮಗ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ ಎಂದು ಹೆಮ್ಮೆ ಉಂಟಾಯಿತು. ಆದರೆ, ಸರ್ಕಾರ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹುತಾತ್ಮ ಯೋಧನ ತಂದೆ ಓಂ ಪ್ರಕಾಶ್  ಒತ್ತಾಯಿಸಿದರಲ್ಲದೇ, ಇದು ಸೇಡು ತೀರಿಸಿಕೊಳ್ಳಲು ಸೂಕ್ತ ಸಮಯ ಎಂದರು.
ಪಂಕಜ್ ತ್ರಿಪಾಠಿ ಕಾಶ್ಮೀರಕ್ಕೆ ತೆರಳುವ ಮುನ್ನ  ಎರಡು ತಿಂಗಳು ಕುಟುಂಬದೊಂದಿಗೆ ಕಾಲ ಕಳೆದಿದ್ದರು ಎಂದು ಅವರು ಹೇಳಿದರು.ಗ್ರಾಮದಲ್ಲಿನ ಅನೇಕ ಕುಟುಂಬಗಳಲ್ಲಿ ಇಂದು ಬೆಳಗ್ಗೆಯಿಂದ ಅಡುಗೆ ಮಾಡಿಲ್ಲ ಎಂದು ಗ್ರಾಮಸ್ಥರು ಹೇಳಿದರು.
ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಗ್ರಾಮಸ್ಥರು ಬೀದಿಯಲ್ಲಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪಂಕಜ್ ಅಮರ್ ರಹೇ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT