ತಮಿಳುನಾಡು: ಪ್ರೀತಿ ನಿರಾಕರಿಸಿದ್ದ ಶಿಕ್ಷಕಿಯನ್ನು ಶಾಲೆ ಎದುರಲ್ಲೇ ಕೊಂದ! 
ದೇಶ

ತಮಿಳುನಾಡು: ಪ್ರೀತಿ ನಿರಾಕರಿಸಿದ್ದ ಶಿಕ್ಷಕಿಯನ್ನು ಶಾಲೆ ಎದುರಲ್ಲೇ ಕೊಂದ!

:ಪ್ರೀತಿ ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಶಿಕ್ಷಕಿಯನ್ನು ಆಕೆಯ ಶಾಲೆಯ ಮುಂದೆಯೇ ಇರಿದು ಕೊಂದಿರುವ ಘಟನೆ ತಮಿಳುನಾಡಿನ ಕಡಲೂರ್ ಜಿಲ್ಲೆಯಲ್ಲಿ ನಡೆದಿದೆ.

ಚೆನ್ನೈ:ಪ್ರೀತಿ ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಶಿಕ್ಷಕಿಯನ್ನು ಆಕೆಯ ಶಾಲೆಯ ಮುಂದೆಯೇ ಇರಿದು ಕೊಂದಿರುವ  ಘಟನೆ ತಮಿಳುನಾಡಿನ ಕಡಲೂರ್ ಜಿಲ್ಲೆಯಲ್ಲಿ ನಡೆದಿದೆ.
ಶುಕ್ರವಾರ ಮುಂಜಾನೆ ಕಡಲೂರಿನ ಕುರಿಂಜಿಪಾಡಿ ಗ್ರಾಮದ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಎಸ್. ರಮ್ಯ(23) ಮೃತ ದುರ್ದೈವಿಯಾಗಿದ್ದು ಈಕೆ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು.
ಶುಕ್ರವಾರ ಬೆಳಿಗ್ಗೆ ಶಾಲೆ ತೆರೆಯಲು ತಡವಾಗಿದ್ದ ಕಾರಣ ಶಾಲೆ ಮುಂದೆ ನಿಂತು ಕಾಯುತ್ತಿದ್ದಾಗ ಮೋಟಾರುಬೈಕಿನಲ್ಲಿ  ಬಂದಿದ್ದ ರಾಜಶೇಖರ್ ಸಮೀಪಕ್ಕೆ ಬಂದು ಶಿಕ್ಷಕಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಶಿಕ್ಷಕಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ರಾಜಶೇಖರ್ ಕಳೆದ ಕೆಲ ತಿಂಗಳಿನಿಂದ ರಮ್ಯಾಳನ್ನು ಹಿಂಬಾಲಿಸುತ್ತಾ ಆಕೆ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನೆನ್ನಲಾಗಿದೆ. ಆದರೆ ರಮ್ಯಾ ಆತನ ಪ್ರೀತಿಯನ್ನು ನಿರಾಕರಿಸಿದ್ದಳು.ಇದರಿಂದ ಕೋಪಗೊಂಡ ಆತ ಈ ಕೃತ್ಯ ಎಸಗಿದ್ದಾನೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಕಡಲೂರಿನ ಪೆರಿಯಾರ್ ಆರ್ಟ್ಸ್ ಕಾಲೇಜಿನಿಂದ ಪದವಿ ಪಡೆದ ನಂತರ ರಮ್ಯಾ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹ್ಗಿಸುತ್ತಿದ್ದರು.
"ನಾವು ಆರೋಪಿಗಳನ್ನು ಗುರುತಿಸಿದ್ದೇವೆ ಮತ್ತು ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಹುಡುಕುತ್ತಿದ್ದು ಶೀಘ್ರವೇ ಬಂಧಿಸಲಿದ್ದೇವೆ"ಡಲೂರು ಜಿಲ್ಲೆಯ ಪೊಲೀಸ್ ಅಧೀಕ್ಷಕ ಪಿ. ಸರವಣನ್ ಪತ್ರಿಕೆಗೆ ತಿಳಿಸಿದ್ದಾರೆ. ಆದರೆ ರಾಜಶೇಖರ್ ವಿರುದ್ಧ ಈ ಹಿಂದೆ ಯಾವುದೇ ದೂರು ದಾಖಲಾಗಿಲ್ಲ ಎಮ್ದೂ ಅವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT