ನವದೆಹಲಿ: ನಾವು ಭಾರತೀಯರು, ನಮ್ಮಲ್ಲಿ ಯಾವುದೇ ಜಾತಿ ಮತ್ತು ಧರ್ಮ ಅಸ್ತಿತ್ವದಲ್ಲಿಲ್ಲ ಎಂದು ವಿಶ್ವದ ಅತಿ ದೊಡ್ಡ ಸೇನಾಪಡೆಯ ಮುಖ್ಯ ವಕ್ತಾರರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮವೊಂದು ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್ ಪಿಎಫ್ ಯೋಧರ ಜಾತಿ ಬಗ್ಗೆ ವರದಿ ಮಾಡಿದಕ್ಕೆ ಪ್ರತಿಕ್ರಿಯಿಸಿರುವ ಸಿಆರ್ ಪಿಎಫ್ ಮುಖ್ಯ ವಕ್ತಾರ ಹಾಗೂ ಡಿಐಜಿ ಎಂ ದಿನಕರನ್ ಅವರು, ಸಿಆರ್ ಪಿಎಫ್ ನಲ್ಲಿರುವ ನಮ್ಮನ್ನು ಭಾರತೀಯರೆಂದು ಗುರುತಿಸಿ. ಅದಕ್ಕು ಹೆಚ್ಚು, ಕಮ್ಮಿ ಯಾವುದು ಬೇಡ. ಜಾತಿ, ಬಣ್ಣ ಮತ್ತು ಧರ್ಮದ ಆಧಾರದ ಮೇಲೆ ವಿಭಜನೆ ನಮ್ಮ ರಕ್ತದಲ್ಲೇ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಹುತಾತ್ಮ ಯೋಧರನ್ನು ಅವಮಾನಿಸುವ ಅಂತಹ ಮಾಧ್ಯಮ ವರದಿಗಳನ್ನು ತಡೆ ಹಿಡಿಯಬೇಕು ಎಂದು ದಿನಕರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.