ದೇಶ

2015, 2016, 2017 ಮತ್ತು 2018ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿ ಪ್ರದಾನ

Nagaraja AB
ನವದೆಹಲಿ:  2015, 2016, 2017 ಮತ್ತು 18ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಷ್ಟ್ರಪತಿ ಭವನದಲ್ಲಿ  ಇಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರ 2015ನೇ ಸಾಲಿನ ಹಾಗೂ ಅಕ್ಷಯ ಪಾತ್ರಾ ಫೌಂಡೇಶನ್ ಮತ್ತು ಸುಲಭ್ ಇಂಟರ್ ನ್ಯಾಷನಲ್‍ ಸಂಸ್ಥೆಗಳು ಜಂಟಿಯಾಗಿ 2016ನೇ ಸಾಲಿನ ಪ್ರಶಸ್ತಿ ಸ್ವೀಕರಿಸಿದವು.ಏಕಲ್ ಅಭಿಯಾನ ಟ್ರಸ್ಟ್ 2017ನೇ ಸಾಲಿನ ಪ್ರಶಸ್ತಿ ಹಾಗೂ ಯೋಹಿ ಸಸಾಕಾವಾ 2018ನೇ ಗಾಂಧಿ ಶಾಂತಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
 ಈ ಹಿಂದೆ ತಾಂಜೇನಿಯಾದ ಮಾಜಿ ಅಧ್ಯಕ್ಷ ಡಾ. ಜೂಲಿಯಸ್ ಕೆ. ನ್ಯೆರೆರೆ, ಶ್ರೀಲಂಕಾದ ಸರ್ವೋದಯ ಮೂವ್‍ಮೆಂಟ್‍ನ ಸಂಸ್ಥಾಪಕ ಅಧ್ಯಕ್ಷ ಡಾ. ಎ.ಟಿ. ಅರಿಯರತ್ನೆ, ರಾಮ ಕೃಷ್ಣ ಮಿಷನ್, ಬಾಬಾ ಆಮ್ಟೆ (ಮುರಳೀಧರ್ ದೇವಿದಾಸ್ ಆಮ್ಟೆ), ಡಾ. ನೆಲ್ಸನ್ ಮಂಡೇಲಾ ಮತ್ತು ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕ್ (ಜಂಟಿಯಾಗಿ), ಭಾರತೀಯ ವಿದ್ಯಾ ಭವನ, ಆರ್ಚ್ ಬಿಷಪ್ ಡೆಸ್ಮಂಡ್ ಟುಟು, ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಪ್ರಶಸ್ತಿಗೆ ಭಾಜನವಾಗಿವೆ.
ಈ ಪ್ರಶಸ್ತಿಯನ್ನು 2004, 2006, 2007, 2008, 2009, 2010, 2011 ಮತ್ತು 2012 ರವರೆಗೆ ನೀಡಲಾಗಿಲ್ಲ.
SCROLL FOR NEXT