ಸಂಗ್ರಹ ಚಿತ್ರ 
ದೇಶ

ಖಾಸಗಿ ಎಫ್ ಎಂ ಚಾನೆಲ್‌ಗಳಲ್ಲಿ ಆಕಾಶವಾಣಿ ಸುದ್ದಿ ಪ್ರಸಾರ: ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್

ಆಕಾಶವಾಣಿಯಲ್ಲಿ ಪ್ರಸಾರವಾಗುವ ಸುದ್ದಿಯನ್ನು ಖಾಸಗಿ ಎಫ್‌ಎಂ ಚಾನೆಲ್‌ಗಳು ತಮ್ಮ ವಾಹಿನಿಗಳಲ್ಲಿ ಇಂದಿನಿಂದ ಪ್ರಸಾರ ಮಾಡಲಿದೆ.

ನವದೆಹಲಿ: ಆಕಾಶವಾಣಿಯಲ್ಲಿ ಪ್ರಸಾರವಾಗುವ ಸುದ್ದಿಯನ್ನು ಖಾಸಗಿ ಎಫ್‌ಎಂ ಚಾನೆಲ್‌ಗಳು ತಮ್ಮ ವಾಹಿನಿಗಳಲ್ಲಿ ಇಂದಿನಿಂದ ಪ್ರಸಾರ ಮಾಡಲಿದೆ.
ಹೌದು.. ಇಷ್ಟು ದಿನ ಸರ್ಕಾರಿ ಸ್ನಾಮ್ಯದ ಆಕಾಶವಾಣಿಯಲ್ಲಿ ಮಾತ್ರ ಪ್ರಸಾರವಾಗುತ್ತಿದ್ದ ವಾರ್ತಾಪ್ರಸಾರವನ್ನು ಇನ್ನು ಮುಂದೆ ಖಾಸಗಿ ವಾಹಿನಿಗಳಲ್ಲೂ ಪ್ರಸಾರ ಮಾಡಬಹುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ.
ಆಕಾಶವಾಣಿಯೊಂದಿಗೆ  ಮಾತನಾಡಿದ ರಾಥೋಡ್ ಅವರು, 'ಇದೊಂದು ಪ್ರಮುಖ ಬೆಳವಣಿಗೆ ಈ ಮೂಲಕ ಬೃಹತ್ ಸಮೂಹವನ್ನು ಆಕಾಶವಾಣಿ ಬಹಳ ಸುಲಭವಾಗಿ ಸುದ್ದಿ ಮೂಲಕ ತಲುಪಲಿದೆ ಎಂದರು. ಮಾಧ್ಯಮಗಳಲ್ಲಿ ಮುಖ್ಯ ಪಾತ್ರವಹಿಸಿರುವ  ರೇಡಿಯೋ ಮೂಲಕವೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಜನಪ್ರಿಯತೆ ಗಳಿಸಿದೆ. ಆಕಾಶವಾಣಿ ಎಫ್‌ಎಂ ವಾಹಿನಿಗಳು ದೇಶದ ಶೇಕಡ 50ರಷ್ಟು ಜನರನ್ನು ತಲುಪುತ್ತಿದೆ. ಹೀಗಾಗಿ ಯುಪಿಎ ಸರ್ಕಾರವು ಜನರನ್ನು ತಲುಪಲು  ಮಾಧ್ಯಮಗಳನ್ನೇ ಅತಿ ಹೆಚ್ಚು ಬಳಸಿಕೊಂಡಿದ್ದು,2005ರಿಂದ 2014ರ ಅವಧಿಯಲ್ಲಿ 56 ಕೋಟಿ ಚದರ ಸೆಂಟಿಮೀಟರ್ ವ್ಯಾಪ್ತಿಯನ್ನು ಪತ್ರಿಕೆಗಳಲ್ಲಿ ಜಾಹೀರಾತು ನೀಡಲು ಬಳಸಿಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ಸಂವಿಧಾನದ ಮಾನ್ಯತೆ ಹೊಂದಿರದ  ಯುಪಿಎ ಮೈತ್ರಿಕೂಟದ ಅಧ್ಯಕ್ಷರ ಭಾವಚಿತ್ರವನ್ನೂ ಪತ್ರಿಕೆಗಳ ಜಾಹೀರಾತಿನಲ್ಲಿ ನೀಡಲಾಗಿದ್ದು, ಮಾಧ್ಯಮಗಳ ಪ್ರಬಲತೆಯನ್ನು ಅರಿಯಬಹುದು ಎಂದು ರಾಥೋಡ್ ತಿಳಿಸಿದರು.
ಇನ್ನು ಆಕಾಶವಾಣಿಯ ಈ ಬಹು ಉದ್ದೇಶಿತ ಯೋಜನೆ ಇಂದು ಮಧ್ಯಾಹ್ನದಿಂದ ಜಾರಿಗೆ ಬರಲಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ರಾಥೋಡ್ ನವದೆಹಲಿಯಲ್ಲಿ ಇಂದು ಮಧ್ಯಾಹ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT