ಅಲೋಕ್ ವರ್ಮಾ 
ದೇಶ

ಸಿಬಿಐ ವಿವಾದ: ಅಲೋಕ್ ವರ್ಮಾರಿಂದ ವರ್ಗಾವಣೆ,ಅಸ್ತಾನ ಸಹಚರರಿಂದ ಹೈಕೋರ್ಟ್ ನಲ್ಲಿ ಅರ್ಜಿ

ವಿವಿಧ ಅಧಿಕಾರಿಗಳ ವರ್ಗಾವಣೆ ಆದೇಶ ಹಿಂಪಡೆಯುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ನಿರ್ಧಾರದ ವಿರುದ್ಧ ಸಿಬಿಐ ಉಪ ಎಸ್ಪಿ ದೇವೇಂದ್ರ ಕುಮಾರ್ ಇಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ನವದೆಹಲಿ: ವಿವಿಧ ಅಧಿಕಾರಿಗಳ ವರ್ಗಾವಣೆ ಆದೇಶ  ಹಿಂಪಡೆಯುವ ಸಿಬಿಐ  ನಿರ್ದೇಶಕ ಅಲೋಕ್ ವರ್ಮಾ ಅವರ ನಿರ್ಧಾರದ ವಿರುದ್ಧ ಸಿಬಿಐ ಉಪ ಎಸ್ಪಿ ದೇವೇಂದ್ರ ಕುಮಾರ್ ಇಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

 ಹೈಕೋರ್ಟ್ ನ್ಯಾಯಾಧೀಶ ನಾಜ್ಮಿ ವಾಜಿರಿ ಮುಂದೆ ನಾಳೆ ಈ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ವಿಶೇಷ ನಿರ್ದೇಶಕ ರಾಕೇಶ್ ಅಸ್ತನಾ, ಕುಮಾರ್ ಮತ್ತು ಮಧ್ಯವರ್ತಿ ಮನೋಜ್ ಪ್ರಸಾದ್  ವಿರುದ್ಧದ ಲಂಚ ಪ್ರಕರಣದಲ್ಲಿ ಎಫ್ ಐಆರ್ ರದ್ದುಗೊಳಿಸುವಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಈ ನ್ಯಾಯಾಧೀಶರೇ ನಡೆಸಿದ್ದು, ತೀರ್ಪನ್ನು ಕಾಯ್ದಿರಿಸಿದ್ದಾರೆ.
ಕೇಂದ್ರ ಸರ್ಕಾರ ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ನಂತರ  ಅಲೋಕ್  ವರ್ಮಾ ಅವರನ್ನೇ ಸಿಬಿಐ ನಿರ್ದೇಶಕರಾಗಿ ಮುಂದುವರೆಯುವಂತೆ ಸುಪ್ರೀಂಕೋರ್ಟ್  ಕಳೆದ ಮಂಗಳವಾರ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ  77 ದಿನಗಳ ನಂತರ ಅಲೋಕ್ ವರ್ಮಾ ವರ್ಮಾ ನಿನ್ನೆಯಿಂದ ಮತ್ತೆ ಅಧಿಕಾರ ವಹಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯ ಹೈಡ್ರಾಮಕ್ಕೆ ತೆರೆ: ಬೆಳಗ್ಗೆ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ; ಮೇ 13ಕ್ಕೆ ಬಹುಮತ ಸಾಬೀತು

ಕಾಂಗ್ರೆಸ್‌ನಿಂದ ದ್ರೋಹ, ಸೌಜನ್ಯಕ್ಕಾದರೂ ಧನ್ಯವಾದ ಹೇಳಲಿಲ್ಲ: ಎಂ.ಕೆ ಸ್ಟಾಲಿನ್ ಕಿಡಿ

ಅಸಾಧ್ಯವನ್ನು ಸಾಧ್ಯವಾಗಿಸಿದರು; ದಕ್ಷಿಣದಲ್ಲಿ BJP ನೆಲೆಯೂರುವಂತೆ ಮಾಡಿದ್ದೇ ಯಡಿಯೂರಪ್ಪ: ಅಮಿತ್ ಶಾ; Video

120 ಶಾಸಕರ ಬಲ ಸಿಗುತ್ತಿದ್ದಂತೆ ರಾಜ್ಯಪಾಲರ ಭೇಟಿ: ಸರ್ಕಾರ ರಚನೆಗೆ 'ಸರ್ಕಾರ್' ಹಕ್ಕು ಮಂಡನೆ; ನಾಳೆ ವಿಜಯ್ ಪ್ರಮಾಣವಚನ?

ಅಧಿಕಾರ ತಪ್ಪಿಸಿದ ಅಪವಾದ ಬರಬಾರದು, ರಾಷ್ಟ್ರಪತಿ ಆಳ್ವಿಕೆ ಬೇಡ: ನಟ ವಿಜಯ್ ಬೆಂಬಲ ಘೋಷಣೆ ಬಳಿಕ VCK ಮುಖ್ಯಸ್ಥ ಹೇಳಿಕೆ! Video

SCROLL FOR NEXT