ದೇಶ

2019 ಲೋಕಸಭಾ ಚುನಾವಣೆ 3ನೇ ಪಾಣಿಪತ್ ಕದನದಂತೆ, ಗೆಲ್ಲಲೇಬೇಕು- ಅಮಿತ್ ಶಾ

Nagaraja AB
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯನ್ನು 1761ರಲ್ಲಿ ಮರಾಠ ಹಾಗೂ ಅಫ್ಘಾನರ ನಡುವೆ ನಡೆದಿದ್ದ  ಮೂರನೇ ಪಾಣಿಪತ್  ಕದನಕ್ಕೆ ಹೋಲಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಈ ಚುನಾವಣೆಯನ್ನು ಗೆಲ್ಲಲೇಬೇಕಾಗಿದೆ ಎಂದು ಹೇಳಿದ್ದಾರೆ.
ರಾಮಲೀಲಾ ಮೈದಾನದಲ್ಲಿ ಬಿಜೆಪಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮಹಾಘಟಬಂದನ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ರಾಜಕೀಯ ರಾಸಾಯನಶಾಸ್ತ್ರದಂತೆ , ಭೌತಶಾಸ್ತ್ರದಂತೆ ಅಲ್ಲ, ಉತ್ತರ ಪ್ರದೇಶದಲ್ಲಿ 2014ರ ಸಾಧನೆ ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ
ಮೂರನೇ ಪಾಣಿಪತ್ ಕದನಕ್ಕೂ ಮುನ್ನ ಮರಾಠರು 131 ಯುದ್ದಗಳಲ್ಲಿ ಗೆಲುವು ಸಾಧಿಸಿ ಉತ್ತುಂಗ ಶಿಖರಕ್ಕೇರಿದರು. ನಂತರ. ಭಾರತವನ್ನು 200 ವರ್ಷಗಳವರೆಗೆ ಗುಲಾಮರನ್ನಾಗಿ ಮಾಡಲಾಯಿತು. 2019 ಚುನಾವಣೆ ಸೈದ್ಧಾಂತಿಕ ಯುದ್ಧವಾಗಿದೆ. ಇದು ದಶಕಗಳವರೆಗೆ ಪರಿಣಾಮವನ್ನು ಬೀರುತ್ತದೆ, ಆದ್ದರಿಂದ ಚುನಾವಣೆಯಲ್ಲಿ ಗೆಲ್ಲಲೇಬೇಕಾಗಿದೆ ಎಂದರು.
SCROLL FOR NEXT