ರಾಷ್ಟ್ರೀಯ ತನಿಖಾ ದಳ 
ದೇಶ

ಘಾಜಿಯಾಬಾದ್: ಎನ್ಐಎನಿಂದ ಇಸಿಸ್ ಪ್ರೇರಿತ ಸಂಘಟನೆ 12 ಉಗ್ರರ ಬಂಧನ

ಆತ್ಮಹತ್ಯೆ ದಾಳಿಗಳು ಮತ್ತು ಸರಣಿ ಸ್ಪೋಟಗಳ ಸಂಬಂಧ, ದೆಹಲಿ ಮತ್ತಿತರೆಡೆಗಳಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಗುರುಇಯಾಗಿರಿಸಿಕೊಂಡಿದ್ದ ಇಸಿಸ್ ಗುಂಪಿನ ಸದಸ್ಯರನ್ನು .....

ನವದೆಹಲಿ: ಆತ್ಮಹತ್ಯೆ ದಾಳಿಗಳು ಮತ್ತು  ಸರಣಿ ಸ್ಪೋಟಗಳ ಸಂಬಂಧ, ದೆಹಲಿ ಮತ್ತಿತರೆಡೆಗಳಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿರಿಸಿಕೊಂಡಿದ್ದ ಇಸಿಸ್ ಗುಂಪಿನ ಸದಸ್ಯರನ್ನು ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಹೇಳಿಕೊಂಡಿದೆ.
ಮೀರತ್, ಹಾಪುರ್ ಮತ್ತು ಘಾಜಿಯಾಬಾದ್ ನಲ್ಲಿ ಶನಿವಾರ ಹಲವರನ್ನು ಬಂಧಿಸಲಾಗಿ, ವಿಚಾರಣೆ ನಡೆಸಲಾಗಿದೆ ಎಂದು ಸಂಸ್ಥೆ ಹೇಳಿದೆ.ಮುಹಮ್ಮದ್ ಅಬ್ಸರ್ (24) ಎಂಬಾತನನ್ನು ಶುಕ್ರವಾರ ರಾತ್ರಿ ಹಾಪುರ್ ನಲ್ಲಿ ಬಂಧಿಸಿದ್ದಾಗಿ ಏಜೆನ್ಸಿಯ ವಕ್ತಾರರು ಮಾಹಿತಿ ನೀಡಿದ್ದಾರೆ. 
ಅಲ್ಲದೆ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿದ್ದ ಒಟ್ಟಾರೆ 12 ಜನರನ್ನು ಎನ್ಐಎ ಬಂಧಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಬ್ಸರ್ ಉತ್ತರಪ್ರದೇಶದ ಮೀರತ್ ಜಿಲ್ಲೆಯ ಜಸೊರಾ ನಿವಾಸಿಯಾಗಿದ್ದು ಘಾಜಿಯಾಬಾದ್ ನ ಪಿಪ್ಪಿರಾ ಪ್ರದೇಶದಲ್ಲಿರುವ ಜಾಮಿಯಾ ಹುಸನಿಯಾ ಅಬುಲ್ ಹಾಸನದಲ್ಲಿ ಉಗ್ರ ಚಟುವಟಿಕೆ ತರಬೇತಿ ನೀಡುತ್ತಿದ್ದನೆಂದು ಅವರು ಹೇಳಿದರು. ಅಷ್ಟೇ ಅಲ್ಲದೆ ಅಬ್ಸರ್ ಕಳೆದ ಮೇ-ಆಗಸ್ಟ್ 2018 ರ ನಡುವೆ ಕಾಶ್ಮೀರದ ಮೂರು ಸ್ಥಳಗಳಿಗೆ ಭೇಟಿ ನೀಡಿದ್ದನು. ಇವನೊಡನೆ ಇನ್ನೊಬ್ಬ ಆರೋಪಿಯಾಗಿರುವ ಇಫ್ತಿಕರ್ ಸಕೀಬ್ ಸಹ ಇದ್ದನು, ಇವರಿಬ್ಬರೂ ಭಯೋತ್ಪಾದಕ  ಚಟುವಟಿಕೆ ಸಂಬಮ್ಂಧ ಪಿತೂರಿ ನಡೆಸಲು ಯೋಜಿಸಿದ್ದರು.
ಶನಿವಾರ ಇಲ್ಲಿ ವಿಶೇಷ ಎನ್ಐಎ ನ್ಯಾಯಾಲಯಕ್ಕೆಇವರುಗಳನ್ನು ಹಾಜರುಪಡಿಸುತ್ತಿದ್ದು ಅವರ ನ್ಯಾಯಾಂಗ ಬಂಧನಕ್ಕಾಗಿ ಮನವಿ ಸಲ್ಲಿಸಲಾಗಿದೆ.ಈ ಆರೋಪಿಗಳು ಜಾಗತಿಕ ಭಯೋತ್ಪಾದಕ ಸಮೂಹ ಇಸಿಸ್ ನ  'ಹರ್ಕಾತ್ ಉಲ್ ಹರಬ್ ಇಸ್ ಇಸ್ಲಾಂ' ಘಟಕದ ಭಾಗವಾಗಿದ್ದರೆಂದ್ಯು ಎನ್ಐಎ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT