ಭರವಸೆ ಈಡೇರಿಸದ ಜನ ನಾಯಕರಿಗೆ ಸಾರ್ವಜನಿಕರಿಂದಲೇ ಒದೆ ಬೀಳುತ್ತೆ: ನಿತಿನ್ ಗಡ್ಕರಿ 
ದೇಶ

ಭರವಸೆ ಈಡೇರಿಸದ ಜನ ನಾಯಕರಿಗೆ ಸಾರ್ವಜನಿಕರಿಂದಲೇ ಒದೆ ಬೀಳುತ್ತೆ: ನಿತಿನ್ ಗಡ್ಕರಿ

ಇತ್ತೀಚಿನ ದಿನಗಳಲ್ಲಿ ವಿಲಕ್ಷಣ ಹೇಳಿಕೆಗಳನ್ನು ನೀಡುತ್ತಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಈಗ ಅಂಥಹದ್ದೇ ಹೇಳಿಕೆಯೊಂದನ್ನು ನೀಡಿದ್ದಾರೆ.

ನಾಗ್ಪುರ: ಇತ್ತೀಚಿನ ದಿನಗಳಲ್ಲಿ ವಿಲಕ್ಷಣ ಹೇಳಿಕೆಗಳನ್ನು ನೀಡುತ್ತಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಈಗ ಅಂಥಹದ್ದೇ ಹೇಳಿಕೆಯೊಂದನ್ನು ನೀಡಿದ್ದಾರೆ. 
ಸಾರ್ವಜನಿಕರಿಗೆ ಕನಸುಗಳನ್ನು ಕಟ್ಟಿಕೊಡುವ ರೀತಿಯಲ್ಲಿ ಭರವಸೆ ನೀಡಿ ಅದನ್ನು ಈಡೇರಿಸುವಲ್ಲಿ ವಿಫಲವಾದರೆ ಅವರಿಗೆ ಸಾರ್ವಜನಿಕರಿಂದಲೇ ಒದೆ ಬೀಳುತ್ತದೆ ಎಂಬ ಅರ್ಥದಲ್ಲಿ ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದಾರೆ. ಜನಪ್ರತಿನಿಧಿಗಳು ಎಂದಿಗೂ ಈಡೇರಿಸಬಹುದಾದ ಕನಸುಗಳನ್ನು ಮಾತ್ರ ಜನರಿಗೆ ತೋರಿಸಬೇಕು ಎಂದು ಹೇಳಿದ್ದು ನಾನು ಜನರಲ್ಲಿ ಸುಮ್ಮನೆ ಕನಸುಗಳನ್ನು ಬಿತ್ತುವವರ ಪೈಕಿ ಅಲ್ಲ, ನಾನು ಸಾಧ್ಯವಾಗುವುದನ್ನು ಮಾತ್ರವೇ ಹೇಳುತ್ತೇನೆ ಎಂದು ಗಡ್ಕರಿ ಹೇಳಿದ್ದಾರೆ. 
ಜನರು ತಮಗೆ ಭಾರಿ ಆಸೆಗಳನ್ನು ತೋರಿಸುವ ನಾಯಕರನ್ನು ಇಷ್ಟಪಡುತ್ತಾರೆ, ಆದರೆ ಅದೇ ನಾಯಕ ಅದನ್ನು ಈಡೇರಿಸುವಲ್ಲಿ ವಿಫಲವಾದರೆ, ಜನರ ಆಕ್ರೋಶಕ್ಕೆ ಆ ನಾಯಕ ಗುರಿಯಾಗಬೇಕಾಗುತ್ತದೆ. ಇದೇ ಕಾರಣದಿಂದಲೇ ಕನಸನ್ನು ನನಸಾಗಿಸಬಹುದಾದ ಭರವಸೆಗಳನ್ನಷ್ಟೇ ನಾವು ಜನರಿಗೆ ನೀಡಬೇಕೆಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ಬಾಲಿವುಡ್ ನಾಯಕಿ ಇಶಾ ಕೊಪ್ಪಿಕರ್ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿಕೊಳ್ಳುವ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಮಾತನಾಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಜೊತೆ ರಷ್ಯಾ ಗೌಪ್ಯ ಮಾಹಿತಿ ಹಂಚಿಕೆ: ವಿಶ್ವದಲ್ಲೇ ಅತ್ಯುತ್ತಮ ಗುಪ್ತಚರ ವ್ಯವಸ್ಥೆ ನಮ್ಮದು, ಭಯವಿಲ್ಲ ಎಂದ ಅಮೆರಿಕಾ

LPG Price Hike: ದೇಶದ ನಾಗರಿಕರಿಗೆ ತಟ್ಟಿದ ಬಿಸಿ, ಇರಾನ್ ಯುದ್ಧ ಮಧ್ಯೆ ಎಲ್ ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

Karnataka Budget 2026-ಬೆಂಗಳೂರು ನಂತರ ರಾಜ್ಯದ ಎರಡನೇ ಐಟಿ ನಗರವಾಗಿ ಮೈಸೂರು ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯ

ನ್ಯೂಯಾರ್ಕ್ ನಲ್ಲೇ ನಿಮ್ಮ ಬುಡ ಗಟ್ಟಿ ಇಲ್ಲ; ಇನ್ನು ನಮ್ಮ ದೇಶದ ಅಧಿಕಾರ ಬದಲಾಯಿಸ್ತೀರಾ?: ಟ್ರಂಪ್ ಬಗ್ಗೆ ಇರಾನ್ ಅಪಹಾಸ್ಯ!

ಕೇಂದ್ರದಿಂದ ಅಸಹಕಾರ, ಮಲತಾಯಿ ಧೋರಣೆ, ಆದರೂ ವಿತ್ತೀಯ ಶಿಸ್ತು ಪಾಲನೆ: CM ಸಿದ್ದರಾಮಯ್ಯ

SCROLL FOR NEXT