ಚುನಾವಣೇಲಿ ಬಿಜೆಪಿ ಗೆ ಜಯ: ಗುಜರಾತಿನಿಂದ ದೆಹಲಿಗೆ ಸೈಕಲ್ ಮೇಲೆ ಬಂದು ಪ್ರಧಾನಿಗೆ ಶುಭಕೋರಿದ ಅಭಿಮಾನಿ!
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮುನ್ನೂರಕ್ಕೆ ಹೆಚ್ಚು ಸ್ಥಾನ ಗಳಿಸಿದ್ದ ಕಾರಣ ಗುಜರಾತಿನ ಅಭಿಮಾನಿಯೊಬ್ಬ ತನ್ನ ಊರಿಂದ ದೆಹಲಿಗೆ ಸೈಕಲ್ ಮೇಲೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಅಭಿನಂದಿಸಿರುವ ಅಪರೂಪದ ಘಟನೆ ನಡೆದಿದೆ.
ಬಿಜೆಪಿ ಕಾರ್ಯಕರ್ತ ಖಿಂಚಂದ್ ಚಂದ್ರಾಣಿ ಗುಜರಾತಿನ ಅಮ್ರೆಲಿಯಿಂದ ಸೈಕಲ್ ಏರಿ ದೆಹಲಿಗೆ ಆಗಮಿಸಿದ್ದು ಪ್ರಧಾನಿಗೆ ಶುಭಾಶಯಕೋರಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 300 ಕ್ಕೂ ಹೆಚ್ಚು ಸ್ಥಾನಗಳು ದೊರೆತರೆ, ನಾನು ಸೈಕಲ್ನಲ್ಲಿ ದೆಹಲಿಗೆ ಬರುತ್ತೇನೆ ಮತ್ತು ಅವರನ್ನು ಅಭಿನಂದಿಸುತ್ತೇನೆ ಎಂದು ಚಂದ್ರಾಣಿ ಸಂಕಲ್ಪ ಮಾಡಿದ್ದರು. ಅದರಂತೆ ಅವರಿಂದು ದೆಹಲಿಗೆ ಆಗಮಿಸಿದ್ದಾರೆ.
ಇನ್ನು ಅವರ ಸೈಕಲ್ ಪ್ರಯಾಣವು ಹಲವಾರು ಅಭಿಮಾನಿಗಳನ್ನು ಸೆಳೆದಿದ್ದು ನಮ್ರತೆ, ಉತ್ಸಾಹ ಹಲವರನ್ನು ಆಕರ್ಷಿಸಿದೆ.
"ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 300 ಕ್ಕೂ ಹೆಚ್ಚು ಸ್ಥಾನಗಳು ಬಂದರೆ ಅವರನ್ನು ಅಭಿನಂದಿಸಲು ನಾನು ಸೈಕಲ್ನಲ್ಲಿ ದೆಹಲಿಗೆ ಬರುತ್ತೇನೆ ಎಂಬ ನಿರ್ಣಯವನ್ನು ಕೈಗೊಂಡಿದ್ದೆ, ಈ ದೂರವನ್ನು ಕ್ರಮಿಸಲು ನನಗೆ 17 ದಿನಗಳು ಬೇಕಾಯಿತು. ನಾನು ಪ್ರಧಾನ ಮಂತ್ರಿಯೊಂದಿಗೆ ಮಾತನಾಡಿದೆ, ಅವರು 'ನಿಮಗೆ ತುಂಬಾ ಧೈರ್ಯವಿದೆ' ಎಂದು ಹೇಳಿದರು. ನಾನು ನಾಳೆ ಅಥವಾ ನಾಡಿದ್ದು ಗೃಹಮಂತ್ರಿ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದೇನೆ." ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos