ಬಿಪಿನ್ ರಾವತ್ 
ದೇಶ

ಪಾಕಿಸ್ತಾನಕ್ಕೀಗ ಧೈರ್ಯವಿಲ್ಲ, ಕಾರ್ಗಿಲ್ ನಂತಹ ಪ್ರಯತ್ನ ಮತ್ತೆ ಮಾಡಲ್ಲ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

1999 ರಲ್ಲಿ ಕಾಂರ್ಗಿಲ್ ನಲ್ಲಿ ಮಾಡಿದಂತೆ ಪಾಕಿಸ್ತಾನ ಇನ್ನೊಮ್ಮೆ ಪ್ರಯತ್ನ ಮಾಡುವುದಿಲ್ಲ ಏಕೆಂದರೆ ಅದು ಸಾಕಷ್ಟು "ಪರಿಣಾಮಗಳನ್ನು" ಉಂಡಿದೆ ಎಂದು ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ

ನವದೆಹಲಿ: 1999 ರಲ್ಲಿ ಕಾಂರ್ಗಿಲ್ ನಲ್ಲಿ ಮಾಡಿದಂತೆ ಪಾಕಿಸ್ತಾನ ಇನ್ನೊಮ್ಮೆ ಪ್ರಯತ್ನ ಮಾಡುವುದಿಲ್ಲ ಏಕೆಂದರೆ ಅದು ಸಾಕಷ್ಟು "ಪರಿಣಾಮಗಳನ್ನು" ಉಂಡಿದೆ ಎಂದು ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.  ಸಶಸ್ತ್ರ ಪಡೆಗಳು ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ನಿಗಾ ವಹಿಸಿದೆ ಎಂದು ಅವರು ಪ್ರತಿಪಾದಿಸಿದರು
ಕಾರ್ಗಿಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಯುದ್ಧದ 20 ವರ್ಷಗಳ ಆಪರೇಷನ್ ವಿಜಯ್ ನೆನಪಿಗಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
"ನಾವು ಯಾವುದೇ ಪ್ರದೇಶವನ್ನೂ ರಕ್ಷಿಸದೆ ಬಿಡುವುದಿಲ್ಲ.  ನಮ್ಮ ಕಣ್ಗಾವಲು ತಂಡವು ಕಟ್ಟುನಿಟ್ಟಾಗಿ ಕಾವಲು ಕಾಯುತ್ತಿವೆ. ಗಡಿಯಲ್ಲಿ ನಿಯಮಿತವಾಗಿ ಗಸ್ತು ತಿರುಗುತ್ತಿದೆ
"ಪಾಕಿಸ್ತಾನವು  ಅಂತಹದನ್ನು (ಕಾರ್ಗಿಲ್ ನಂತೆ)ಮತ್ತೆ ಯುದ್ಧಕ್ಕೆ ಮುಂದಾಗುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಅವರು ಅದರ ಪರಿಣಾಮಗಳನ್ನು ನೋಡಿದ್ದಾರೆ. ಮುಂಬರುವ ದಿನಗಳು ಮತ್ತು ವರ್ಷಗಳಲ್ಲಿ ಪಾಕಿಸ್ತಾನ ಯಾವುದೇ ಒಳನುಸುಳುವಿಕೆಯನ್ನು ಪ್ರಯತ್ನಿಸಲು ಧೈರ್ಯ ಮಾಡುವುದಿಲ್ಲ" ಎಂದು ಸೇನಾ ಮುಖ್ಯಸ್ಥರು ಸುದ್ದಿಗಾರರಿಗೆ ತಿಳಿಸಿದರು.
 ಬಾಲಿವುಡ್ ಗೀತರಚನೆಕಾರ ಸಮೀರ್ ಬರೆದ ಕಾರ್ಗಿಲ್ ವೀರರಿಗೆ ಮೀಸಲಾದ ವಿಶೇಷ ಗೌರವದ ಹಾಡಿನ ವಿಡಿಯೋವನ್ನೂ ಅವರು ಬಿಡುಗಡೆ ಮಾಡಿದರು.ವೀಡಿಯೊದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಇತರ ಪ್ರಸಿದ್ಧ ನಟರು ಇದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT