ಕಲರಾಜ್ ಮಿಶ್ರಾ 
ದೇಶ

ಹಿಮಾಚಲ ಪ್ರದೇಶ ನೂತನ ರಾಜ್ಯಪಾಲರಾಗಿ ಕಲರಾಜ್ ಮಿಶ್ರಾ ನೇಮಕ, ಆಚಾರ್ಯ ದೇವ್ರತ್ ಗುಜರಾತ್ ಗೆ ವರ್ಗಾ

ಬಿಜೆಪಿ ಹಿರಿಯ ನಾಯಕ ಕಲರಾಜ್ ಮಿಶ್ರಾ ಅವರನ್ನು ಹಿಮಾಚಲ ಪ್ರದೇಶ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದ್ದು, ಹಾಲಿ ರಾಜ್ಯಪಾಲ ಆಚಾರ್ಯ...

ನವದೆಹಲಿ: ಬಿಜೆಪಿ ಹಿರಿಯ ನಾಯಕ ಕಲರಾಜ್ ಮಿಶ್ರಾ ಅವರನ್ನು ಹಿಮಾಚಲ ಪ್ರದೇಶ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದ್ದು, ಹಾಲಿ ರಾಜ್ಯಪಾಲ ಆಚಾರ್ಯ ದೇವ್ರತ್ ಅವರನ್ನು ಗುಜರಾತ್ ರಾಜ್ಯಪಾಲರಾಗಿ ವರ್ಗಾವಣೆ ಮಾಡಲಾಗಿದೆ.
ಹಿಮಾಚಲ ಪ್ರದೇಶ ರಾಜ್ಯಪಾಲರಾಗಿ ಕಲರಾಜ್ ಮಿಶ್ರಾ ಅವರನ್ನು ಹಾಗೂ ಗುಜರಾತ್ ರಾಜ್ಯಪಾಲರನ್ನಾಗಿ ಆಚಾರ್ಯ ದೇವ್ರತ್ ಅವರನ್ನು ನೇಮಕ ಮಾಡಲಾಗಿದೆ ಎಂದು ಇಂದು ರಾಷ್ಟ್ರಪತಿ ಭವನ ಪ್ರಕಟಣೆಯಲ್ಲಿ ತಿಳಿಸಿದೆ.
78 ವರ್ಷದ ಕಲರಾಜ್ ಮಿಶ್ರಾ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯ ಸರ್ಕಾರದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿದ್ದಾರೆ. ವಯಸ್ಸಿನ ಕಾರಣದಿಂದ ಅವರು 2017ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಗುಜರಾತ್ ರಾಜ್ಯಪಾಲ ಒಪಿ ಕೊಹ್ಲಿ ಅವರು ಇಂದು ನಿವೃತ್ತಿಯಾಗುತ್ತಿದ್ದು, ಅವರ ಸ್ಥಾನಕ್ಕೆ 60 ವರ್ಷದ ಆಚಾರ್ಯ ದೇವ್ರತ್ ಅವರನ್ನು ವರ್ಗಾವಣೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ರಾಜಕೀಯ ಪ್ರವೇಶವೇ ತಪ್ಪು ನಿರ್ಧಾರ': ನಾನು ಎಂದಿಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಲಿಲ್ಲ': ಡೆತ್ ನೋಟ್ ನಲ್ಲಿ ಆಸೀಶ್ ಬ್ಯಾನರ್ಜಿ ಪಶ್ಚಾತ್ತಾಪ!

ಮಮತಾ ಆಪ್ತ ಹಾಗೂ ಮಾಜಿ ಉಪಸಭಾಪತಿ ಅಸೀಶ್ ಬ್ಯಾನರ್ಜಿ TMC ಕಚೇರಿಯಲ್ಲಿ ಶವವಾಗಿ ಪತ್ತೆ!

ಮುಂದಿನ ವರ್ಷ ಆಗಸ್ಟ್ ವೇಳೆಗೆ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ: ಸಚಿವ ಎನ್. ಚಲುವರಾಯಸ್ವಾಮಿ

ಮೋದಿನೇ ಡಿ.ಕೆ - ಡಿ.ಕೆ ಅಂತಿದ್ದಾರೆ ನೀವ್ಯಾಕೆ ತಲೆ ಕೆಡಿಸಿಕೊಳ್ಳುತ್ತಿದ್ದೀರಾ? ಫ್ರೀಡಂ ಹಬ್ಬದಲ್ಲಿ ಡಿ.ಕೆ ಶಿವಕುಮಾರ್ ಟಾಂಗ್

ನಿಂತಿಲ್ಲ ಸೋನಿಯಾ ಗಾಂಧಿ ವಿರುದ್ಧ 'ವಂದೇ ಮಾತರಂ' ಟೀಕೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಂಚಿಕೊಂಡ ವಿಡಿಯೊದಲ್ಲಿ ಏನಿದೆ?-Video