ಪುಣೆ: ಟ್ರಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 9 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಪುಣೆ-ಸೊಲ್ಲಾಪುರ ಹೆದ್ದಾರಿಯಲ್ಲಿ ಬರುವ ಕದಂವಕ್ ವಸ್ತಿ ಗ್ರಾಮದ ಬಳಿ ನಡೆದಿದೆ.
ಪುಣೆ-ಸೊಲ್ಲಾಪುರ ಹೆದ್ದಾರಿಯಲ್ಲಿ ಬರುವ ಕದಂವಕ್ ವಸ್ತಿ ಗ್ರಾಮದ ಬಳಿ ಈ ಅಪಘಾತ ನಡೆದಿದೆ. ಶುಕ್ರವಾರ ತಡರಾತ್ರಿ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿಯಾಗಿವೆ.
ಅಕ್ಷಯ್ ಭರತ್ ವೈಕರ್, ವಿಶಾಲ್ ಸುಭಾಷ್ ಯಾದವ್, ನಿಖಿಲ್ ಚಂದ್ರಕಾಂತ್, ನೂರ್ ಮಹಮ್ಮದ್ ಅಬ್ಬಾಸ್ ದಯಾ, ಪರ್ವೇಜ್ ಅತ್ತರ್, ಶುಭಂ ರಾಮ್ದಾಸ್ ಭಿಸೆ, ಅಕ್ಷಯ್ ಚಂದ್ರಕಾಂತ್, ದತ್ತ ಗಣೇಶ್ ಯಾದವ್, ಜುಬೇರ್ ಅಜೀಜ್ ಮುಲಾನಿ ಮೃತರು. ಪುಣೆಯ ಯಾವತ್ ಗ್ರಾಮದವರಾದ ಇವರೆಲ್ಲರೂ ಕಾಲೇಜು ವಿದ್ಯಾರ್ಥಿಗಳು.
ಇವರೆಲ್ಲ ರಾಯಗಢಕ್ಕೆ ಪ್ರವಾಸಕ್ಕೆ ತೆರಳಿ ಪುಣೆಗೆ ಮರಳುವಾಗ ಅಪಘಾತ ಸಂಭವಿಸಿದೆ. ಕಾರು ಡಿವೈಡರ್ ಬಳಿ ಜಂಪ್ ಆಗಿದೆ. ಅದೇ ಸಮಯಕ್ಕೆ ಪುಣೆ ಕಡೆಯಿಂದ ಬರುತ್ತಿದ್ದ ಬರುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಪುಣೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.