ಅಂಗನವಾಡಿ ಮಕ್ಕಳ ಬಿಸಿಯೂಟಕ್ಕಾಗಿ ಅಡಿಗೆಮನೆಯಾಗಿ ಬದಲಾದ ಶೌಚಾಲಯ! 
ದೇಶ

ಅಂಗನವಾಡಿ ಮಕ್ಕಳ ಬಿಸಿಯೂಟಕ್ಕಾಗಿ ಅಡಿಗೆಮನೆಯಾಗಿ ಬದಲಾದ ಶೌಚಾಲಯ!

ಈ ಅಂಗನವಾಡಿ ಮಕ್ಕಳಿಗೆ ಬಡಿಸುವ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಅಡಿಗೆಯನ್ನು ಶೌಚಾಲಯ ಕೋಣೆಯಲ್ಲಿ ತಯಾರಾಗುತ್ತದೆ!

ಭೋಪಾಲ್: ಈ ಅಂಗನವಾಡಿ ಮಕ್ಕಳಿಗೆ ಬಡಿಸುವ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಅಡಿಗೆಯನ್ನು ಶೌಚಾಲಯ ಕೋಣೆಯಲ್ಲಿ ತಯಾರಾಗುತ್ತದೆ! ಹೌದು ಮಧ್ಯಪ್ರದೇಶದ  ಶಿವಪುರಿ ಜಿಲ್ಲೆಯ ಗ್ರಾಮೀಣ ಮಕ್ಕಳ ಆರೈಕೆ ಕೇಂದ್ರದಲ್ಲಿನ ದುಸ್ಥಿತಿಯ ಕಥೆ ಇದು. ಆರೋಗ್ಯದ ಮಾನದಂಡ ಗಳನ್ನು ಸಂಪೂರ್ಣವಾಗಿ ಗಾಳಿ ತೂರಿರುವ ಅಧಿಕಾರಿಗಳು ಸ್ಥಳದ ಕೊರತೆ ನೆಪ ಹೇಳಿ ಶೌಚಾಲಯದ ಆವರಣದಲ್ಲೇ ಮಕ್ಕಳ ಬಿಸಿಯೂಟ ಅಡಿಗೆ ತಯಾರಿಸುತ್ತಿದ್ದಾರೆ.
ಕರೇರಾ ಎಂಬಲ್ಲಿನ ಅಂಗನವಾಡಿ ಮಕ್ಕಳಿಗೆ ಬಿಸಿಯೂಟಕ್ಕಾಗಿ ಆಹಾರ ತಯಾರಿಸಲು ಸ್ಥಳಾವಕಾಶದ ಕೊರತೆ ಇದೆ. ಇದರಿಂದಾಗಿ ಅಲ್ಲಿನ ಶೌಚಾಲಯವನ್ನೇ ತಾತ್ಕಾಲಿಕ ಅಡಿಗೆಮನೆಯಾಗಿ ಬದಲಿಸಿಕೊಳ್ಲಲಾಗಿದೆ.ಇನ್ನೂ ಆಘಾತಕಾರಿ ಅಂಶವೆಂದರೆ ಶೌಚಾಲಯದಲ್ಲೇ ನೀರು ಬಳಸಿ ಆಹಾರ ಬೇಯಿಸಲಾಗುತ್ತಿದ್ದು ಇದೇ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ.
"ನಮಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಶೌಚಾಲಯದ ಹೊರತು ಬೇರಾವ ಸ್ಥಳವಿಲ್ಲ" ಎಂದು ಅಂಗನವಾಡಿ  ಕೇಂದ್ರದ ಸಿಬ್ಬಂದಿ ರಾಜ್‌ಕುಮಾರಿ ಯೋಗಿ ಹೇಳುತ್ತಾರೆ.
ಅಡಿಗೆ ತಯಾರಿಗಾಗಿ ಸ್ಥಳಾವಖಾಶದ ಕೊರತೆ ಸಮಸ್ಯೆ ಇದೆ. ಈ ಸಂಬಂಧ ಹಲವಾರು ಬಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.ಹಾಗಾಗಿ ನಾವು ಶೌಚಾಲಯದ ಒಂದು ಬಾಗವನ್ನೇ ಅಡಿಗೆ ಕೋಣೆಯಾಗಿ ಪರಿವರ್ತಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾ ಅಧಿಕಾರಿ ಪ್ರಿಯಾಂಕಾ ಅವರಿಗೆ ನೈರ್ಮಲ್ಯದ ಕುರಿತಂತೆ ಪ್ರಶ್ನೆ ಕೇಳಿದರೆ ಅಂತಹಾ ಯಾವ ಸಮಸ್ಯೆ ಇಲ್ಲ ಎಂದು ಉತ್ತರಿಸಿದ್ದಾರೆ. ಶೌಚಾಲಯ ನಿರ್ಮಾಣ ಪೂರ್ಣವಾಗಿಲ್ಲ, ಬೇರೆಡೆ ನೀರು ಸರಬರಾಜು ವ್ಯವಸ್ಥೆ ಸರಿಯಿಲ್ಲದ ಕಾರಣ ಅಲ್ಲಿಯೇ ಅಡಿಗೆ ತಯಾರಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಶಿವಪುರಿಯಲ್ಲಿ ಇಂತಹಾ ಪ್ರಸಂಗ ಇದೇ ಮೊದಲಲ್ಲ, ಇದಕ್ಕೆ ಹಿಂದೆ ಎರಡು ಬಾರಿ ಇಂತಹಾ ದೂರುಗಳು ಬಂದಿದ್ದವು,ಈ ಹಿಂದೆ, ಶೌಚಾಲಯಗಳನ್ನು ಕಿರಾಣಿ ಅಂಗಡಿ ಮತ್ತು ಅಡುಗೆಮನೆಯಾಗಿ ಬಳಸಿದ ಉದಾಹರಣೆಗಳೂ ಇಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT