ದೇಶ

ಉತ್ತರ ಪ್ರದೇಶ: ಬಿರುಗಾಳಿ,ಸಿಡಿಲಿನಿಂದ 13 ಸಾವು, 21 ಮಂದಿ ಗಾಯ

Nagaraja AB
ಉತ್ತರ ಪ್ರದೇಶ:  ಉತ್ತರ ಪ್ರದೇಶದ ವಿವಿಧ ಕಡೆಗಳಲ್ಲಿ ಬಿರುಗಾಳಿ ಹಾಗೂ ಸಿಡಿಲಿನಿಂದ 13 ಮಂದಿ ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ ಎಂದು ರಾಜ್ಯ ಪರಿಹಾರ ಆಯುಕ್ತರು ತಿಳಿಸಿದ್ದಾರೆ.
ಸಿಡಿಲಿನಿಂದ ಮೊರಾದಬಾದಿನಲ್ಲಿ ಒಪ್ಪರು ಮೃತಪಟ್ಟಿದ್ದರೆ, ಕಾಸ್ ಗಾಂಜ್ ಹಾಗೂ ಇತ್ಹಾದಲ್ಲಿ ಮೂವರು, ಮೈನ್ ಪುರಿಯಲ್ಲಿ ಒಬ್ಬರು ದುರ್ಮರಣ ಹೊಂದಿದ್ದಾರೆ ಎಂದು ಆಯುಕ್ತರು ಅಧಿಕೃತ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಗುರುವಾರ ಸಂಜೆಯಿಂದ ವಿಪರೀತ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿ ಬಿದಿದ್ದು, ಗೋಡೆಗಳು ಕುಸಿದು ಬಿದ್ದಿವೆ. ಮೈನ್ ಪುರಿಯಲ್ಲಿ 20 ಮಂದಿ ಹಾಗೂ ಬಾದೌನ್ ನಲ್ಲಿ ಒಬ್ಬರು ಗಾಯಗೊಂಡಿರುವುದಾಗಿ ಹೇಳಲಾಗಿದೆ. 
ಸಂತ್ರಸ್ತರಿಗೆ  ಪರಿಹಾರ ಒದಗಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
SCROLL FOR NEXT