ರೈತರ ಮಹಿಳೆಯರು 
ದೇಶ

ತೆಲಂಗಾಣದ ಈ ಗ್ರಾಮದ ರೈತ ಮಹಿಳೆಯರು ತಮ್ಮ ಬೈಕ್ ಮೇಲೆ ಜಮೀನು ಕೆಲಸಕ್ಕೆ ಹೋಗುತ್ತಾರೆ!

ತೆಲಂಗಾಣದ ಒಂದು ಸಣ್ಣ ಹಳ್ಳಿ ಮಹಿಳಾ ಸಬಲೀಕರಣದಲ್ಲಿ ದೊಡ್ಡ ಕ್ರಾಂತಿಯೇ ಮಾಡಿದೆ. ಜಗ್ತಿಯಾಲ್ ದಿಂದ ಏಳು ಕಿ.ಮೀ. ದೂರದಲ್ಲಿರುವ ಲಕ್ಷ್ಮೀಪುರ...

ಜಗ್ತಿಯಾಲ್: ತೆಲಂಗಾಣದ ಒಂದು ಸಣ್ಣ ಹಳ್ಳಿ ಮಹಿಳಾ ಸಬಲೀಕರಣದಲ್ಲಿ ದೊಡ್ಡ ಕ್ರಾಂತಿಯೇ ಮಾಡಿದೆ. ಜಗ್ತಿಯಾಲ್ ದಿಂದ ಏಳು ಕಿ.ಮೀ. ದೂರದಲ್ಲಿರುವ ಲಕ್ಷ್ಮೀಪುರ ಗ್ರಾಮದಲ್ಲಿ ಮಹಿಳೆಯರು ತಮ್ಮ ವಿವಿಧ ಕೆಲಸಗಳಿಗೆ ತೆರಳಲು ಪುರುಷರ ಸಹಾಯಕ್ಕಾಗಿ ಕಾಯುವುದಿಲ್ಲ. ನಿತ್ಯ ತಮ್ಮದೇ ದ್ವಿಚಕ್ರ ವಾಹನವೇರಿ ಹೊಲಗಳಿಗೆ ಹೋಗಿ ಕೆಲಸ ಮಾಡಿ ಬರುತ್ತಾರೆ. ಅಲ್ಲದೆ ಇತರೆ ಮಹಿಳಾ ಕಾರ್ಮಿಕರಿಗೂ ತಮ್ಮ ವಾಹನದ ಮೇಲೆ ಕರೆದುಕೊಂಡು ಹೋಗುತ್ತಾರೆ.
ಲಕ್ಮೀಪುರದಲ್ಲಿ ಒಟ್ಟು 5 ಸಾವಿರ ಜನಸಂಖ್ಯೆ ಹೊಂದಿದ್ದು, 1200 ಕುಟುಂಬಗಳು ಕೃಷಿಯನ್ನು ಅವಲಂಭಿಸಿವೆ. ಇಲ್ಲಿ ಮಹಿಳೆಯರು ಸಹ ಕೃಷಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದು, ತಮ್ಮ ಸ್ಕೂಟಿಗಳ ಮೂಲಕ ಹೊಲಕ್ಕೆ ಹೋಗಿ ಕೆಲಸ ಮಾಡಿ ಬರುತ್ತಾರೆ ಮತ್ತು ಅದೇ ಸ್ಕೂಟಿಯಲ್ಲಿ ತರಕಾರಿಯನ್ನು ಜಗ್ತಿಯಾಲ್ ಮಾರುಕಟ್ಟೆಗೆ ಸಾಗಿಸುತ್ತಾರೆ.
ನಾನು ಮಹಿಳೆಯಾದರೂ ಪುರುಷರಂತೆ ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ಯಾವುದಕ್ಕೂ ನಾನು ಪುರುಷರನ್ನು ಅವಲಂಭಿಸುವುದಿಲ್ಲ. ಸಮಯ ಉಳಿಸುವುದಕ್ಕಾಗಿ ಸ್ಕೂಟಿಯನ್ನು ಬಳಸುತ್ತಿರುವುದಾಗಿ ಎಸ್ ಸರಿತಾ ಎಂಬ ರೈತ ಮಹಿಳೆ ಹೇಳುತ್ತಾರೆ.
ಈ ಸಣ್ಣ ಗ್ರಾಮದಲ್ಲಿ 70 ಕ್ಕೂ ಹೆಚ್ಚು ರೈತ ಮಹಿಳೆಯರು ಸ್ಕೂಟಿಯಲ್ಲೇ ಹೊಲಕ್ಕೆ ತೆರಳುತ್ತಾರೆ. ಇದು ನೋಡಲು ತುಂಬಾ ಅದ್ಭೂತವಾಗಿರುತ್ತದೆ. ಈ ಗ್ರಾಮದಲ್ಲಿ ರೈತರು, ಭತ್ತ, ಅರಿಶಿಣ, ಶುಂಠಿ, ಬಾಳೆಹಣ್ಣು, ಕಡಲೆಕಾಯಿ ಮತ್ತು ತರಕಾರಿಗ ಬೆಳೆಯುತ್ತಾರೆ. ಇಲ್ಲಿ ಟೊಮ್ಯಾಟೊ ಹೆಚ್ಚಾಗಿ ಬೆಳೆಯುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT