ದೇಶ

ಪಶ್ಚಿಮ ಬಂಗಾಳ: ಗುಂಡಿಕ್ಕಿ ಬಿಜೆಪಿ ಕಾರ್ಯಕರ್ತೆ ಹತ್ಯೆ, ಟಿಎಂಸಿ ಕೈವಾಡದ ಶಂಕೆ

Sumana Upadhyaya
ನಾರ್ಥ್ 24 ಪರ್ಗನಾಸ್(ಪಶ್ಚಿಮ ಬಂಗಾಳ): ಇಲ್ಲಿನ ಬಸಿರ್ಹಾಟ್ ಎಂಬಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತೆ ಸರಸ್ವತಿ ದಾಸ್ ಎಂಬುವವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಗೃಹಿಣಿಯಾಗಿರುವ ಸರಸ್ವತಿ ದಾಸ್ ಅವರನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ಗೂಂಡಾಗಳು ಕೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. 
ಸರಸ್ವತಿ ದಾಸ್ ಅವರನ್ನು ಟಿಎಂಸಿ ಗೂಂಡಾಗಳು ಕೊಂದು ಹಾಕಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದ ಗೃಹ ಖಾತೆ ಸಚಿವೆ ಕೂಡ ಹೌದು, ಅವರ ಕೈಯಲ್ಲಿ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಸರಸ್ವತಿ ದಾಸ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
SCROLL FOR NEXT