ಸಂಗ್ರಹ ಚಿತ್ರ 
ದೇಶ

ನಿಮಗೆ ಗೊತ್ತೆ..? ಪ್ರತೀ ಮೂವರು ಮೋದಿ ಬೆಂಬಲಿಗರ ಪೈಕಿ ಓರ್ವ ಉಳಿದ ಇಬ್ಬರಂತೆಯೇ ಮೂರ್ಖ..!

ಇದು ನಿಮಗೆ ಗೊತ್ತೆ..? ಪ್ರತೀ ಮೂವರು ಮೋದಿ ಬೆಂಬಲಿಗರ ಪೈಕಿ ಓರ್ವ ಉಳಿದ ಇಬ್ಬರಂತೆಯೇ ಮೂರ್ಖ ರಂತೆ..

ನವದೆಹಲಿ: ಇದು ನಿಮಗೆ ಗೊತ್ತೆ..? ಪ್ರತೀ ಮೂವರು ಮೋದಿ ಬೆಂಬಲಿಗರ ಪೈಕಿ ಓರ್ವ ಉಳಿದ ಇಬ್ಬರಂತೆಯೇ ಮೂರ್ಖ ರಂತೆ..
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ನಾಯಕರ ಆರೋಪ-ಪ್ರತ್ಯಾರೋಪ, ವಾಗ್ದಾಳಿ, ಕಾಲೆಳೆಯುವಿಕೆ, ವ್ಯಂಗ್ಯದಂತಹ ಪ್ರಹಸನಗಳು ಮುಗಿಲು ಮುಟ್ಟಿದ್ದು, ಇದೀಗ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ, ಮೋದಿ ಬೆಂಬಲಿಗರ ಕಾಲೆಳೆದಿದ್ದಾರೆ. ಪುಲ್ವಾಮ ಉಗ್ರ ದಾಳಿ, ಅಭಿನಂದನ್ ವರ್ಧಮಾನ್ ಪ್ರಕರಣ, ವಾಯುದಾಳಿ ಕುರಿತು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಮ್ಯಾ ಇದೀಗ ನೇರವಾಗಿ ಮೋದಿ ಬೆಂಬಲಿಗರ ಕಾಲೆಳೆದಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಮೋದಿ ಬೆಂಬಲಿಗರನ್ನು ಉದ್ದೇಶಿಸಿ ವ್ಯಂಗ್ಯವಾಡಿರುವ ರಮ್ಯಾ.. ಇದು ನಿಮಗೆ ಗೊತ್ತೆ..? ಪ್ರತೀ ಮೂವರು ಮೋದಿ ಬೆಂಬಲಿಗರ ಪೈಕಿ ಓರ್ವ ಉಳಿದ ಇಬ್ಬರಂತೆಯೇ ಮೂರ್ಖ ರಂತೆ ಎಂದು ಮೋದಿ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇದನ್ನು ತಮ್ಮ ನೆಚ್ಚಿನದ್ದು ಎಂದು ವ್ಯಂಗ್ಯ ಮಾಡಿದ್ದಾರೆ. 
ಇನ್ನು ಈ ವಿಚಾರವನ್ನು ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಆ ಸಂಸ್ಥೆಗೂ ಧನ್ಯವಾದ ಹೇಳುವ ಮೂಲಕ ರಮ್ಯಾ ಆ ಸಂಸ್ಥೆಯ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ರಮ್ಯಾ ಅವರ ಈ ಟ್ವೀಟ್ ಗೆ ವ್ಯಾಪಕ ಪರ-ವಿರೋಧ ಟ್ವೀಟ್ ಗಳು ಹರಿದು ಬರುತ್ತಿದ್ದು, ಈ ಟ್ವೀಟ್ ವೈರಲ್ ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT