ಭಾಷಾ ವ್ಯಾಕರಣದಲ್ಲಿ ದೋಷವಿರಬಹುದು ಭಾವನೆಯಲ್ಲಿ ಅಲ್ಲ: ಮತ್ತೆ ಎಲ್ಲರ ಮನಗೆಲ್ಲುತ್ತಿದೆ ಸುಷ್ಮಾ ಸ್ವರಾಜ್ ಟ್ವೀಟ್! 
ದೇಶ

ಭಾಷೆಯ ವ್ಯಾಕರಣದಲ್ಲಿ ದೋಷವಿರಬಹುದು ಭಾವನೆಯಲ್ಲಿ ಅಲ್ಲ: ಮತ್ತೆ ಎಲ್ಲರ ಮನಗೆಲ್ಲುತ್ತಿದೆ ಸುಷ್ಮಾ ಸ್ವರಾಜ್ ಟ್ವೀಟ್!

ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಅನಿವಾಸಿ ಭಾರತೀಯರು, ವಿದೇಶಿಗಳಲ್ಲಿರುವ ಭಾರತೀಯರ ಸಮಸ್ಯೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಮತ್ತೊಮ್ಮೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ನವದೆಹಲಿ: ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಅನಿವಾಸಿ ಭಾರತೀಯರು, ವಿದೇಶಿಗಳಲ್ಲಿರುವ ಭಾರತೀಯರ ಸಮಸ್ಯೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಮತ್ತೊಮ್ಮೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಟ್ವಿಟರ್ ನಲ್ಲೇ ಅದೆಷ್ಟೋ ಜನರಿಗೆ ಸ್ಪಂದಿಸಿರುವ ಅನೇಕ ಉದಾಹರಣೆಗಳಿವೆ. ಈಗ ಎಂದಿನಂತೆಯೇ ನೆರವಿನ ಹಸ್ತ ಚಾಚಿರುವ ಸುಷ್ಮಾ ಸ್ವರಾಜ್ ನಡೆ ಶ್ಲಾಘನೆಗೆ ಅರ್ಹವಾಗಿದೆ. 
ಟ್ವಿಟರ್ ನಲ್ಲಿ ಗೇವಿ ಎಂಬ ವ್ಯಕ್ತಿ ವಿದೇಶದಲ್ಲಿರುವ ತನ್ನ ಅಸ್ವಸ್ಥ ಸ್ನೇಹಿತನನ್ನು ಭಾರತಕ್ಕೆ ಕಳಿಸಲು ಸಹಾಯ ಕೇಳಿ ಸುಷ್ಮಾ ಸ್ವರಾಜ್ ಗೆ ಮನವಿ ಮಾಡಿದ್ದರು. ಆದರೆ ಆತ ತಪ್ಪಾಗಿ ಇಂಗ್ಲೀಷ್ ಭಾಷೆಯಲ್ಲಿ ಟ್ವೀಟ್ ಮಾಡಿದ್ದಕ್ಕೆ ಆತನನ್ನು ಟ್ರೋಲ್ ಮಾಡಲಾಗುತ್ತಿತ್ತು. 
ಹಲವು ವ್ಯಾಕರಣ ದೋಷಗಳಿದ್ದರೂ ಸುಷ್ಮಾ ಸ್ವರಾಜ್ ಆತನ ನೆರವಿಗೆ ಧಾವಿಸಿ ಅಗತ್ಯ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. 
ಪಂಜಾಬ್ ನ ನಿವಾಸಿಯಾಗಿರುವ ಗೇವಿ ಎಂಬ ವ್ಯಕ್ತಿ ಮಲೇಷ್ಯಾದಲ್ಲಿರುವ ತನ್ನ ಅಸ್ವಸ್ಥ ಸ್ನೇಹಿತನನ್ನು ಭಾರತಕ್ಕೆ ಕರೆತರಲು ರಾಜತಾಂತ್ರಿಕ ಅಡ್ಡಿ ಉಂಟಾಗಿದೆ ದಯವಿಟ್ಟು ಸಹಕರಿಸಿ ಎಂದು ಸುಷ್ಮಾಸ್ವರಾಜ್ ಅವರಿಗೆ ಟ್ವಿಟರ್ ನಲ್ಲಿ ತಪ್ಪಾದ ಇಂಗ್ಲೀಷ್ ನಲ್ಲಿ ಮನವಿ ಮಾಡಿದ್ದ. ಆ ಟ್ವೀಟ್ ಗೆ ಸ್ಪಂದಿಸಿ, ಸಹಾಯ ಕೇಳಿದವನ ಭಾಷೆಯನ್ನು ಟ್ರೋಲ್ ಮಾಡಿದ್ದನ್ನು ಗಮನಿಸಿರುವ ಸುಷ್ಮಾ ಸ್ವರಾಜ್, ಸಮಸ್ಯೆ ಇಲ್ಲ. ವಿದೇಶಾಂಗ ಸಚಿವೆಯಾದ ನಂತರ ನಾನು ಜನರು ಮಾತನಾಡುವ ಎಲ್ಲಾ ಶೈಲಿಯ ಇಂಗ್ಲೀಷ್ ಉಚ್ಛಾರಣೆ ಹಾಗೂ ವ್ಯಾಕರಣವನ್ನು ಅರಿಯಲು ಕಲಿತಿದ್ದೇನೆ ಎಂದು ಹೇಳಿದ್ದಾರೆ. 
ಆ ವರೆಗೂ ಬಹಳಷ್ಟು ಜನರು ಟ್ವೀಟ್ ಮಾಡಿದ್ದ ವ್ಯಕ್ತಿಯನ್ನು ಟ್ರೋಲ್ ಮಾಡುತ್ತಿದ್ದರು. ಆದರೆ ಸುಷ್ಮಾ ಸ್ವರಾಜ್ ಅವರು ಪ್ರತಿಕ್ರಿಯೆ ನೀಡಿದ ಬಳಿಕ ಅವರ ಟ್ವೀಟ್ ನ್ನು ಹೊಗಳಿ, ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ನೀವು ಭಾರತ ಕಂಡ ಅತ್ಯದ್ಭುತ ವಿದೇಶಾಂಗ ಸಚಿವರು ಎಂದು ಬಣ್ಣಿಸುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT