ಮನೋಹರ್ ಪರಿಕ್ಕರ್ 
ದೇಶ

40 ಸ್ನೇಹಿತರಿಗೆ ರುಚಿಕರವಾದ ಅಡಿಗೆ ಮಾಡುವ ಮೂಲಕ ಐಐಟಿ ಮೆಸ್ ಮುಷ್ಕರಕ್ಕೆ ಅಂತ್ಯ ಹಾಡಿದ್ದರು ಪರಿಕ್ಕರ್

ಭಾನುವಾರ ನಿಧನದರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಕಾಲೇಜ್ ದಿನಗಳಲ್ಲಿ ಐಐಟಿ-ಬಾಂಬೆಯ 40 ಸ್ನೇಹಿತರಿಗೆ ರುಚಿಕರವಾದ...

ನವದೆಹಲಿ: ಭಾನುವಾರ ನಿಧನದರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಕಾಲೇಜ್ ದಿನಗಳಲ್ಲಿ ಐಐಟಿ-ಬಾಂಬೆಯ 40 ಸ್ನೇಹಿತರಿಗೆ ರುಚಿಕರವಾದ ಅಡಿಗೆ ಮಾಡುವ ಮೂಲಕ ಮೆಸ್ ಕಾರ್ಮಿಕರ ಮುಷ್ಕರಕ್ಕೆ ಅಂತ್ಯಹಾಡಿದ್ದರು ಎಂದು ಅವರ ಆಪ್ತ ಸ್ನೇಹಿತರೊಬ್ಬರು ಪರಿಕ್ಕರ್ ಅವರ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡಿದ್ದಾರೆ.
ಐಐಟಿಯಲ್ಲಿ ಮೆಸ್ ಕಾರ್ಮಿಕರು ದಿಢೀರ್ ಮುಷ್ಕರಕ್ಕೆ ಕರೆ ನೀಡಿದ್ದರು. ಈ ವೇಳೆ ಮೆಸ್ ಕಾರ್ಯದರ್ಶಿಯಾಗಿದ್ದ ಪರಿಕ್ಕರ್ ಅವರು ಹಾಸ್ಟೆರ್ ನ ಎಲ್ಲಾ ಸ್ನೇಹಿತರಿಗೆ ಅಡಿಗೆಮಾಡಿ ಬಡಿಸಿದ್ದರು ಎಂದು ಅವರ ಸ್ನೇಹಿತ ಮುಕುಂದ್ ದೇಶಪಾಂಡೆ ಹೇಳಿದ್ದಾರೆ.
ನಾವು ಎಲ್ಲರೂ ಸಭೆ ಸೇರಿ ಮುಷ್ಕರ ಹಿಂಪಡೆಯುವಂತೆ ಕಾರ್ಮಿಕರಿಗೆ ಮನವಿ ಮಾಡಿದೆವು. ಆದರೆ ಅವರು ನಿರಾಕರಿಸಿದರು. ಹೀಗಾಗಿ ಪರಿಕ್ಕರ್ ನೇತೃತ್ವದಲ್ಲೇ ನಾವೇ ಅಡಿಗೆ ಮಾಡಿದೆವು ಮತ್ತು ಅದು ಅತ್ಯಂತ ರುಚಿಕರವಾಗಿತ್ತು ಎಂದಿದ್ದಾರೆ.
ಮಾಜಿ ರಕ್ಷಣಾ ಸಚಿವ ಪರಿಕ್ಕರ್ ಅವರು 1973ರಿಂದ 1980ರ ವರೆಗೆ ಐಐಟಿ ಬಾಂಬೆ ವಿದ್ಯಾರ್ಥಿಯಾಗಿದ್ದರು. ಪರಿಕ್ಕರ್ ಅವರು ಒಬ್ಬ ಹುಟ್ಟು ನಾಯಕ ಮತ್ತು ವಿನಮ್ರ ವ್ಯಕ್ತಿಯಾಗಿದ್ದರು ಎಂದು ಅವರ ಕಾಲೇಜ್ ಸ್ನೇಹಿತರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT