ನಕ್ಸಲರಿಂದ ಐಐಡಿ ಸ್ಪೋಟ, ಅರ್ಜುನ್‌ ಮುಂಡಾ ಚುನಾವಣಾ ಕಚೇರಿಗೆ ಹಾನಿ 
ದೇಶ

ಜಾರ್ಖಂಡ್: ನಕ್ಸಲರಿಂದ ಐಐಡಿ ಸ್ಪೋಟ, ಅರ್ಜುನ್‌ ಮುಂಡಾ ಚುನಾವಣಾ ಕಚೇರಿಗೆ ಹಾನಿ

ಖರ್‌ಸವಾನ್‌: ಜಾರ್ಖಂಡ್ ನ ಸರೈಕೆಲಾ ಜಿಲ್ಲೆಯ ಖರ್‌ಸವಾನ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಂತಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅರ್ಜುನ್‌ ಮುಂಡಾ ಅವರ ಚುನಾವಣಾ ಕಚೇರಿಯನ್ನು....

ಸರೈಕೆಲಾ-ಖರ್‌ಸವಾನ್‌: ಜಾರ್ಖಂಡ್ ನ ಸರೈಕೆಲಾ ಜಿಲ್ಲೆಯ ಖರ್‌ಸವಾನ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಂತಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅರ್ಜುನ್‌ ಮುಂಡಾ ಅವರ ಚುನಾವಣಾ ಕಚೇರಿಯನ್ನು ಶಂಕಿತ ನಕ್ಸಲರು ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಫೋಟಿಸಿ ಹಾನಿಗೊಳಿಸಿದ್ದಾರೆ. 
ಇಂದು ಮಧ್ಯರಾತ್ರಿ ಶಂಕಿತ ನಾಲ್ವರು ನಕ್ಸಲರು ಚುನಾವಣಾ ಕಚೇರಿಯಲ್ಲಿ ಮಲಗಿದ್ದ ನಾಲ್ವರು ಚಾಲಕರನ್ನು ಬಲವಂತವಾಗಿ ಹೊರಗೆ ಕಳುಹಿಸಿ ಐಇಡಿಯಿಂದ ಕಟ್ಟಡವನ್ನು ಸ್ಫೋಟಿಸಿದ್ದಾರೆ. ಸ್ಫೋಟದಿಂದ ಕಟ್ಟಡದ ಗೋಡೆಯೊಂದು ಹಾನಿಗೊಂಡಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚಂದನ್‌ ಕುಮಾರ್ ಶರ್ಮಾ ತಿಳಿಸಿದ್ದಾರೆ. 
ಘಟನೆ ನಡೆದ ಸ್ಥಳದಲ್ಲಿ 100 ಮೀಟರ್ ಉದ್ದದ ತಂತಿ ಹಾಗೂ ಸ್ಫೋಟಕ ಮತ್ತು ನಕ್ಸಲರ ಬಿತ್ತಿಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 
ಘಟನೆ ನಡೆದ ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಮಾಜಿ ಮುಖ್ಯಮಂತ್ರಿ ಅರ್ಜುನ್‌ ಮುಂಡಾ ಈ ಹಿಂದೆ ಜಮ್‌ಶೆಡ್‌ಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಗೊಂಡಿದ್ದರು. ಈಗ ಕುಂತಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT