ಝಾಕೀರ್ ನಾಯಕ್ 
ದೇಶ

ಈ ಒಂದು ಷರತ್ತಿಗೆ ಒಪ್ಪಿದರೆ ಭಾರತಕ್ಕೆ ವಾಪಸ್ ಬರೋಕೆ ಝಾಕೀರ್ ನಾಯಕ್ ರೆಡಿ!

ಇಸ್ಲಾಮಿಕ್ ಶಿಕ್ಷಕ, ಭಾಷಣಕಾರ ಝಾಕೀರ್ ನಾಯಕ್ ಭಾರತಕ್ಕೆ ಹಿಂದಿರುಗಲು ಸಿದ್ದರಾಗಿದ್ದಾರೆ, ಆದರೆ ಈ ಒಂದು ಷರತ್ತಿನಮೇಲೆ!

ನವದೆಹಲಿ: ಇಸ್ಲಾಮಿಕ್ ಶಿಕ್ಷಕ,  ಭಾಷಣಕಾರ ಝಾಕೀರ್ ನಾಯಕ್ ಭಾರತಕ್ಕೆ ಹಿಂದಿರುಗಲು ಸಿದ್ದರಾಗಿದ್ದಾರೆ, ಆದರೆ ಈ ಒಂದು ಷರತ್ತಿನ ಮೇಲೆ! 
ತಾನು ಆರೋಪಿ ಎಂದು ಸಾಬೀತಾಗುವವರೆಗೆ ಆತನನ್ನು ಬಂಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಭರವಸೆ ನೀಡಿದ್ದಾದರೆ ತಾನು ಭಾರತಕ್ಕೆ ಹಿಂತಿರುಗಲು ಸಿದ್ದ ಎಂದು ಝಾಕೀರ್ ನಾಯಕ್ ಹೇಳಿದ್ದಾರೆ.
ಭಾರತದಿಂದ ಪಲಾಯನ ಮಾಡಿದ ಝಾಕೀರ್ ನಾಯಕ್ 2016ರಿಂದಲೂ ಮಲೇಷಿಯಾದಲ್ಲಿ ವಾಸಿಸುತ್ತಿದ್ದಾರೆ. ಮಲೇಷಿಯಾ ಸರ್ಕಾರ ಅವರಿಗೆ ಶಾಶ್ವತ ನಿವಾಸಿಯ ಸ್ಥಾನಮಾನ ನೀಡಿದೆ.
"ದಿ ವೀಕ್" ಪತ್ರಿಕೆ ಸಂದರ್ಶನವೊಂದರಲ್ಲಿ ಧಾರ್ಮಿಕ ಬೋಧಕರಾದ ಝಾಕೀರ್ ನಾಯಕ್ ತಾನು  ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಹೊಂದಿದ್ದೇನೆ. ಮತ್ತು ಅದು ಈಗಿರುವುದಕ್ಕಿಂತ ಮುಂಚಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿತ್ತು. ಎಂದಿದ್ದಾರೆ.
"ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ  ನೀವು ಸರ್ಕಾರದ ವಿರುದ್ಧ ಮಾತನಾಡಿದ್ದಾದರೂ ಸಹ ಕನಿಷ್ಟ 80 ಪ್ರತಿಶತದಷ್ಟು ನಿಮಗೆ ನ್ಯಾಯ ಲಭಿಸುತ್ತಿತ್ತು. ಆದರೆ ಈಗ ಅಂತಹಾ ಅವಕಾಶ ಕೇವಲ 10ರಿಂದ 20 ಶೇಕಡ ಮಾತ್ರವೇ ಇದೆ.
"ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ, ನಾವೊಮ್ಮೆ ಇತಿಹಾಸವನ್ನು ನೋಡಿದರೆ ಒಮ್ಮೆ ಉಗ್ರಕೃತ್ಯಗಳ ಆರೋಪ ಹೊತ್ತ 90 ಪ್ರತಿಶತದಷ್ಟು ಮುಸ್ಲಿಮರು 10-15 ವರ್ಷಗಳ ನಂತರ ಸ್ವತಂತ್ರವಾಗುತ್ತಾರೆ ಅಥವಾ ಆರೋಪಮುಕ್ತರಾಗುತ್ತಾರೆ. ಹಾಗೆ ನಾನು ಸಹ ಸರಾಸರಿ ಹತ್ತು ವರ್ಷಗಳ ಕಾಲ ಸೆರೆಯಲ್ಲಿರಬೇಕಾಗುವುದು. ಆಗ ನನ್ನ ಯೋಜನೆಗಳೆಲ್ಲವೂ ನಾಶವಾಗಲಿದೆ.ನಾನೇಕೆ ಮೂರ್ಖನಾಗಲಿ?" ಅವರು ಕೇಳಿದ್ದಾರೆ.
ಅಲ್ಲದೆ ರಾಷ್ಟ್ರೀಯ ತನಿಖಾ ಸಂಸ್ಥೆ ಬಯಸಿದ್ದಾದರೆ ಮಲೇಷಿಯಾದಲ್ಲೇ ನನ್ನನ್ನು ಪ್ರಶ್ನಿಸಬಹುದು ಎಂದೂ ಅವರು ಹೇಳಿದ್ದಾರೆ.
ತಮಗೆ ನ್ಯಾಯ ದೊರಕುವ ಭರವಸೆ ಇದ್ದದ್ದಾದರೆ ತಾವು ಭಾರತಕ್ಕೆ ಮರಳುವಿರೆ ಎಂದು ಕೇಳಲು ಝಾಕೀರ್ ನಾಯಕ್ , "ಭಾರತದ ಸುಪ್ರೀಂ ಕೋರ್ಟ್ ನಿಂದ ಭರವಸೆ ಇದ್ದಲ್ಲಿ ನಾನು ಭಾರತಕ್ಕೆ ಮರಳುತ್ತೇನೆ. ಅದೆಂದರೆ ನನ್ನ ಮೇಲಿನ ಆರೋಪ ಸಾಬೀತಾಗುವವರೆಗೆ ನನ್ನನ್ನು ಬಂಧಿಸುವುದಿಲ್ಲ ಎಂದು ಕೋರ್ಟ್ ಭರವಸೆ ನೀಡಿದ್ದಾದರೆ ನಾನು ಭಾರತಕ್ಕೆ ಆಗಮಿಸುವೆ" ಎಂದರು.
ಡಾಕಾದ ಪ್ರಖ್ಯಾತ  ಗುಲ್ಷನ್ ನ ಹೋಲಿ ಆರ್ಟಿಸನ್ ಬೇಕರಿ (ಕೆಫೆ) ಮೇಲೆ ಭಯೋತ್ಪಾದಕ ದಾಳಿಯ ಘಟನೆಯಲ್ಲಿ ಝಾಕೀರ್ ಆರೋಪಿ ಎಂದು ಎನ್ಐಎ ಗುರುತಿಸಿದೆ. ಜುಲೈ 1, 2016ರ ತಡರಾತ್ರಿ ನಡೆಇದ್ದ ಉಗ್ರದಾಳಿಯಲ್ಲಿ ಹೆಚ್ಚಾಗಿ ವಿದೇಶೀಯರೇ ಸೇರಿದಂತೆ 20 ಮಂದಿ ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT