ದೇಶ

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟ ಕಮಲ್ ಹಾಸನ್ ವಿರುದ್ಧ ಕ್ರಿಮಿನಲ್ ದೂರು

Srinivas Rao BV
ನವದೆಹಲಿ: ನಟ ಕಮಲ್ ಹಾಸನ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದಡಿ, ಕ್ರಿಮಿನಲ್ ಪ್ರಕರಣವನ್ನು ದೆಹಲಿಯ ಪಟಿಯಾಲ ಹೌಸ್ ನಲ್ಲಿ ದಾಖಲಿಸಲಾಗಿದೆ. 
ಗಾಂಧಿಯನ್ನು ಕೊಂದಿದ್ದ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ ಎಂಬ ಕಮಲ್ ಹಾಸನ್ ಹೇಳಿಕೆ ವಿರುದ್ಧ ದೇಶಾದ್ಯಂತ ಟೀಕೆ ವ್ಯಕ್ತವಾಗುತ್ತಿದೆ. 
ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದ ಕಮಲ್ ಹಾಸನ್, ಈ ಹೇಳಿಕೆ ನೀಡಿದ್ದರು. ಕಮಲ್ ಹಾಸನ್ ಅವರನ್ನು ಪ್ರಚಾರದಿಂದ ನಿರ್ಬಂಧಿಸಬೇಕೆಂದು ಬಿಜೆಪಿ ಆಗ್ರಹಿಸಿತ್ತು. 
"ಕಮಲ್ ಹಾಸನ್ ಹಿಂದೂಗಳನ್ನು ಭಯೋತ್ಪಾದನೆಗೆ ತಳುಕು ಹಾಕುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ" ಎಂದು ದೂರಿನಲ್ಲಿ ಹೇಳಲಾಗಿದೆ. 
SCROLL FOR NEXT