ರಾಬರ್ಟ್ ವಾದ್ರಾ 
ದೇಶ

ವಿಐಪಿ ಸೌಲಭ್ಯ ಕುರಿತು ಗೇಲಿ ಮಾಡುವ ಪ್ರಧಾನಿಗಳ ಸೋದರನೇ ಈಗ ಬೆಂಗಾವಲು ವಾಹನ ಬಯಸುತ್ತಿದ್ದಾರೆ: ರಾಬರ್ಟ್ ವಾದ್ರಾ

ಯಾರು ಗಾಜಿನ ಮನೆಯಲ್ಲಿ ವಾಸವಾಗಿದ್ದಾರೋ ಅವರು ಬೇರೆಯವರ ಮನೆ ಮೇಲೆ ಕಲ್ಲೆಸೆಯಬಾರದು, ಪ್ರಧಾನಿ ನರೇಂದ್ರ ಮೋದಿ ಬೇರೆಯವರು ಬಳಸುವ ವಿಐಪಿ ಸೌಕರ್ಯವನ್ನು ಅಪಹಾಸ್ಯ ಮಾಡುತ್ತಾರೆ.

ನವದೆಹಲಿ: ಯಾರು ಗಾಜಿನ ಮನೆಯಲ್ಲಿ ವಾಸವಾಗಿದ್ದಾರೋ ಅವರು ಬೇರೆಯವರ ಮನೆ ಮೇಲೆ ಕಲ್ಲೆಸೆಯಬಾರದು, ಪ್ರಧಾನಿ ನರೇಂದ್ರ ಮೋದಿ ಬೇರೆಯವರು ಬಳಸುವ ವಿಐಪಿ ಸೌಕರ್ಯವನ್ನು ಅಪಹಾಸ್ಯ ಮಾಡುತ್ತಾರೆ. ಆದರೆ ಅವರ ತಮ್ಮ ಮಾತ್ರ ಸಾರ್ವಜನಿಕ ಪ್ರದೇಶದಲ್ಲಿ ಸಂಚರಿಸಲು ಪೋಲೀಸ್ ರಕ್ಷಣೆ ಬಯಸಿದ್ದಾರೆ ಎಂದು ಕಾಂಗ್ರೆಸ್ ಮುಖ್ಯ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಟೀಕಿಸಿದ್ದಾರೆ.
ವಾದ್ರಾ ಫೇಸ್ ಬುಕ್ ಪೋಸ್ಟ್ ನಲ್ಲಿ ಮೋದಿಯವರನ್ನು ಟೀಕಿಸಿದ್ದು "ವಿಐಪಿ ಸೌಲಭ್ಯದ ಕುರಿತು ಎಲ್ಲರಿಗೆ ಗೇಲಿ ಮಾಡುವ ಪಿಎಂ ನರೇಂದ್ರ ಮೋದಿ ಅವರ ಪ್ರೀತಿಯ ತಮ್ಮನೇ ಇಂದು ತಮಗೆ ಬೆಂಗಾವಲು ವಾಹನ ನಿಡಬೇಕೆಂದು ಬೇಡಿಕೆ ಇಟ್ಟು ಧರಣಿ ನಡೆಸಿದ್ದಾರೆ. ಇದೇ ಅಚ್ಚೇದಿನ್ ಹೌದೆ?" ಎಂದು ಕೇಳಿದ್ದಾರೆ.
ಪ್ರಧಾನಿ ಮೋದಿಯವರ ಸೋದರ ಪ್ರಹ್ಲಾದ್ ದಾಮೋದರದಾಸ್ ಮೋದಿ ರಾಜಸ್ಥಾನದ ಪೋಲೀಸ್ ಠಾಣೆ ಎದುರು ಬೆಂಗಾವಲು ವಾಹನಕ್ಕೆ ಬೇಡಿಕೆ ಇಟ್ಟು ಧರಣಿ ನಡೆಸಿದ್ದಾರೆ ಎಂಬ ವರದಿಗಳು ಪ್ರಸಾರವಾದ ಬಳಿಕ ವಾದ್ರಾ ಈ ಪೋಸ್ಟ್ ಬರೆದುಕೊಂಡಿದ್ದಾರೆ.
ಇದೇ ವೇಳೆ ರಾಜಸ್ಥಾನ ಸರ್ಕಾರ ಮೋದಿ ಸೋದರರಿಗೆ ಪ್ರತ್ಯೇಕ ಬೆಂಗಾವಲು ವಾಹನ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಹ್ಲಾದ್ ಮೋದಿ ರಾಜಸ್ಥಾನ ಜೈಪುರ- ಅಜ್ಮೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಾಗ್ರು ಪೋಲೀಸ್ ಠಾಣೆ ಎದುರು ಧರಣಿ ಕೈಗೊಂಡಿದ್ದಾರೆ.
ವಾದ್ರಾ ಅವರಿಗೆ ಈ ಹಿಂದಿನ ದಿನಗಳಿಗಿಂತ ಈಗ ಅರ್ಧದಷ್ಟು ಭದ್ರತೆ ಕಡಿಮೆ ಮಾಡಲಾಗಿದೆ. ಆದರೆ ಅವರು ಸರ್ಕಾರದ ಈ ತೀರ್ಮಾನವನ್ನು ಹೃತ್ಪೂರ್ವಕ ಒಪ್ಪಿಕೊಂಡಿದ್ದಾರೆ.
"ಈಗ ಪ್ರಧಾನಿ ತನ್ನ ಸೋದರನೇ ಬೆಂಗಾವಲು ವಾಹನಬಯಸಿ ಧರಣಿ ಕುಳಿತಾಗ ಸನ್ನಿವೇಶವನ್ನು ಯಾವ ರೀತಿ ಬಗೆಹರಿಸುತಾರೆ ನೋಡೋಣ" ವಾದ್ರಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT