ರಾಬರ್ಟ್ ವಾದ್ರಾ 
ದೇಶ

ವಿಐಪಿ ಸೌಲಭ್ಯ ಕುರಿತು ಗೇಲಿ ಮಾಡುವ ಪ್ರಧಾನಿಗಳ ಸೋದರನೇ ಈಗ ಬೆಂಗಾವಲು ವಾಹನ ಬಯಸುತ್ತಿದ್ದಾರೆ: ರಾಬರ್ಟ್ ವಾದ್ರಾ

ಯಾರು ಗಾಜಿನ ಮನೆಯಲ್ಲಿ ವಾಸವಾಗಿದ್ದಾರೋ ಅವರು ಬೇರೆಯವರ ಮನೆ ಮೇಲೆ ಕಲ್ಲೆಸೆಯಬಾರದು, ಪ್ರಧಾನಿ ನರೇಂದ್ರ ಮೋದಿ ಬೇರೆಯವರು ಬಳಸುವ ವಿಐಪಿ ಸೌಕರ್ಯವನ್ನು ಅಪಹಾಸ್ಯ ಮಾಡುತ್ತಾರೆ.

ನವದೆಹಲಿ: ಯಾರು ಗಾಜಿನ ಮನೆಯಲ್ಲಿ ವಾಸವಾಗಿದ್ದಾರೋ ಅವರು ಬೇರೆಯವರ ಮನೆ ಮೇಲೆ ಕಲ್ಲೆಸೆಯಬಾರದು, ಪ್ರಧಾನಿ ನರೇಂದ್ರ ಮೋದಿ ಬೇರೆಯವರು ಬಳಸುವ ವಿಐಪಿ ಸೌಕರ್ಯವನ್ನು ಅಪಹಾಸ್ಯ ಮಾಡುತ್ತಾರೆ. ಆದರೆ ಅವರ ತಮ್ಮ ಮಾತ್ರ ಸಾರ್ವಜನಿಕ ಪ್ರದೇಶದಲ್ಲಿ ಸಂಚರಿಸಲು ಪೋಲೀಸ್ ರಕ್ಷಣೆ ಬಯಸಿದ್ದಾರೆ ಎಂದು ಕಾಂಗ್ರೆಸ್ ಮುಖ್ಯ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಟೀಕಿಸಿದ್ದಾರೆ.
ವಾದ್ರಾ ಫೇಸ್ ಬುಕ್ ಪೋಸ್ಟ್ ನಲ್ಲಿ ಮೋದಿಯವರನ್ನು ಟೀಕಿಸಿದ್ದು "ವಿಐಪಿ ಸೌಲಭ್ಯದ ಕುರಿತು ಎಲ್ಲರಿಗೆ ಗೇಲಿ ಮಾಡುವ ಪಿಎಂ ನರೇಂದ್ರ ಮೋದಿ ಅವರ ಪ್ರೀತಿಯ ತಮ್ಮನೇ ಇಂದು ತಮಗೆ ಬೆಂಗಾವಲು ವಾಹನ ನಿಡಬೇಕೆಂದು ಬೇಡಿಕೆ ಇಟ್ಟು ಧರಣಿ ನಡೆಸಿದ್ದಾರೆ. ಇದೇ ಅಚ್ಚೇದಿನ್ ಹೌದೆ?" ಎಂದು ಕೇಳಿದ್ದಾರೆ.
ಪ್ರಧಾನಿ ಮೋದಿಯವರ ಸೋದರ ಪ್ರಹ್ಲಾದ್ ದಾಮೋದರದಾಸ್ ಮೋದಿ ರಾಜಸ್ಥಾನದ ಪೋಲೀಸ್ ಠಾಣೆ ಎದುರು ಬೆಂಗಾವಲು ವಾಹನಕ್ಕೆ ಬೇಡಿಕೆ ಇಟ್ಟು ಧರಣಿ ನಡೆಸಿದ್ದಾರೆ ಎಂಬ ವರದಿಗಳು ಪ್ರಸಾರವಾದ ಬಳಿಕ ವಾದ್ರಾ ಈ ಪೋಸ್ಟ್ ಬರೆದುಕೊಂಡಿದ್ದಾರೆ.
ಇದೇ ವೇಳೆ ರಾಜಸ್ಥಾನ ಸರ್ಕಾರ ಮೋದಿ ಸೋದರರಿಗೆ ಪ್ರತ್ಯೇಕ ಬೆಂಗಾವಲು ವಾಹನ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಹ್ಲಾದ್ ಮೋದಿ ರಾಜಸ್ಥಾನ ಜೈಪುರ- ಅಜ್ಮೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಾಗ್ರು ಪೋಲೀಸ್ ಠಾಣೆ ಎದುರು ಧರಣಿ ಕೈಗೊಂಡಿದ್ದಾರೆ.
ವಾದ್ರಾ ಅವರಿಗೆ ಈ ಹಿಂದಿನ ದಿನಗಳಿಗಿಂತ ಈಗ ಅರ್ಧದಷ್ಟು ಭದ್ರತೆ ಕಡಿಮೆ ಮಾಡಲಾಗಿದೆ. ಆದರೆ ಅವರು ಸರ್ಕಾರದ ಈ ತೀರ್ಮಾನವನ್ನು ಹೃತ್ಪೂರ್ವಕ ಒಪ್ಪಿಕೊಂಡಿದ್ದಾರೆ.
"ಈಗ ಪ್ರಧಾನಿ ತನ್ನ ಸೋದರನೇ ಬೆಂಗಾವಲು ವಾಹನಬಯಸಿ ಧರಣಿ ಕುಳಿತಾಗ ಸನ್ನಿವೇಶವನ್ನು ಯಾವ ರೀತಿ ಬಗೆಹರಿಸುತಾರೆ ನೋಡೋಣ" ವಾದ್ರಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT