ಮಲಗಿದ್ದವರ ಮೇಲೆ ಗುಂಡುಹಾರಿಸಿ ತನ್ನ ಕುಟುಂಬ ಸದಸ್ಯರನ್ನೇ ಸಾವಿನ ಮನೆಗಟ್ಟಿದ ಪಾಪಿ! 
ದೇಶ

ಮಲಗಿದ್ದವರ ಮೇಲೆ ಗುಂಡುಹಾರಿಸಿ ತನ್ನ ಕುಟುಂಬ ಸದಸ್ಯರನ್ನೇ ಸಾವಿನ ಮನೆಗಟ್ಟಿದ ಪಾಪಿ!

ಯುವಕನೊಬ್ಬ ತನ್ನ ತಂದೆ, ತಾಯಿ, ಸೋದರ ಹಾಗೂ ಪತ್ನಿ ಸೇರಿ ತನ್ನದೇ ಕುಟುಂಬ ಸದಸ್ಯರನ್ನು ರಾತ್ರಿ ಮಲಗಿದ್ದಾಗಲೇ ಗುಂಡಿಕ್ಕಿ ಕೊಂದು ಹಾಕಿರುವ ಅಮಾನುಷ ಘಟನೆ ಮಧ್ಯಪ್ರದೇಶದ ರಾಯಸೇನದಲ್ಲಿ ನಡೆದಿದೆ.

ರಾಯಸೇನ(ಮಧ್ಯಪ್ರದೇಶ): ಯುವಕನೊಬ್ಬ ತನ್ನ ತಂದೆ, ತಾಯಿ, ಸೋದರ ಹಾಗೂ ಪತ್ನಿ ಸೇರಿ ತನ್ನದೇ ಕುಟುಂಬ ಸದಸ್ಯರನ್ನು ರಾತ್ರಿ ಮಲಗಿದ್ದಾಗಲೇ ಗುಂಡಿಕ್ಕಿ ಕೊಂದು ಹಾಕಿರುವ ಅಮಾನುಷ ಘಟನೆ ಮಧ್ಯಪ್ರದೇಶದ ರಾಯಸೇನದಲ್ಲಿ ನಡೆದಿದೆ.
ಜಿತೇಂದ್ರ ಸಿಂಗ್ ಠಾಕೂರ್ ಎಂಬಾತ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ತನ್ನದೇ ಕುಟುಂಬ ಸದಸ್ಯರನ್ನು ರಿವಾಲ್ವರ್ ನಿಂದ ಶೂಟ್ ಮಾಡಿ ಕೊಂದು ಹಾಕಿದ ಪಾಪಿ. ಈತ ತನ್ನ ಹೆತ್ತವರು, ಸೋದರ ಹಾಗೂ ಪತ್ನಿಯನ್ನು ಹತ್ಯೆ ಮಾಡಿದ್ದಾನೆ.
ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ. ಜಿತೇಂದ್ರ ಸಿಂಗ್ ಹಾಗೂ ಆತನ ಪತ್ನಿ ನಡುವೆ ಮನಸ್ತಾಪವಿತ್ತು. ಆಗಾಗ ಜಗಳವಾಗುತ್ತಿತ್ತು. ನಿನ್ನೆ ಸಹ ಇದೇ ರೀತಿ ಜಗಳವಾದಾಗ ಆರೋಪಿಯ ಪೋಷಕರು ಇಬ್ಬರ ಜಗಳ ಬಿಡಿಸಲು ಯತ್ನಿಸಿದ್ದಾರೆ. ಆಗ ಜಿತೇಂದ್ರ ಸಿಂಗ್ ತಾನು ತಾಯಿ, ತಂದೆಗೆ ಮೊದಲು ಕೊಡಲಿಯಿಂದ ಹೊಡೆದಿದ್ದ. ಹಾಗೂ ರಾತ್ರಿ ಮಲಗಿದ್ದ ವೇಳೆ ಗನ್ ತೆಗೆದುಕೊಂಡು ಪತ್ನಿ ಸೇರಿದಂತೆ ನಾಲ್ವರನ್ನು ಕೊಂದು ಹಾಕಿದ್ದಾನೆ ಎಂಬುದಾಗಿ ಪೋಲೀಸರು ಹೇಳಿದ್ದಾರೆ.
ಇನ್ನು ಆರೋಪಿಯ ಏಳು ವರ್ಷದ ಮಗನಿಗೆ ಸಹ ಗುಂಡು ತಗುಲಿದ್ದು ಆತ ತೀವ್ರ ಸ್ವರೂಪದ ಗಾಯಗಳಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗುಂಡಿನ ಸದ್ದು ಕೇಳಿದ ನೆರೆಹೊರೆಯವರು ಆಗಮಿಸಿದಾಗ ಘಟನೆ ಬೆಳಕು ಕಂಡಿದೆ. ಮನೆಯಲ್ಲಿ ಒಟ್ಟು ನಾಲ್ವರ ಶವ ಗಳು ಸಿಕ್ಕಿದ್ದು  ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

I-PAC ಮುಖ್ಯಸ್ಥರ ಮೇಲೆ ED ದಾಳಿ; ಟಿಎಂಸಿ ಆಂತರಿಕ ಡೇಟಾ ಸಂಗ್ರಹಿಸಲು ಯತ್ನ: ಮಮತಾ ಗಂಭೀರ ಆರೋಪ

ಕೋಗಿಲು ಅಕ್ರಮ ಮನೆ ತೆರವು: 26 ಕುಟುಂಬಗಳಿಗೆ ವಸತಿ ಭಾಗ್ಯ; ಮನೆ ಹಂಚಿಕೆಗೆ ಮಾನದಂಡವೇನು- ಜಮೀರ್ ಹೇಳಿದ್ದೇನು?

ಬಳ್ಳಾರಿ ಫೈರಿಂಗ್: CBI ತನಿಖೆಗೆ ಪರಮೇಶ್ವರ್ ನಕಾರ! ಕುಮಾರಸ್ವಾಮಿಗೆ ತಿರುಗೇಟು! Video

ಶೂನ್ಯ ಸಹಿಷ್ಣುತೆ...: ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹೊಸ ಎಚ್ಚರಿಕೆ

ಮಹಾರಾಷ್ಟ್ರ: ಅಮಾನತುಗೊಂಡ 12 ಕಾಂಗ್ರೆಸ್ ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆ

SCROLL FOR NEXT