ಪಬ್ ಜಿ ಗೇಮ್ ನ ಮತ್ತು, ಜೀವಕ್ಕೆ ತಂದಿತು ಆಪತ್ತು! ಆಡಾಡ್ತಾ ಪ್ರಾಣ ಬಿಟ್ಟ 12ನೇ ತರಗತಿ ವಿದ್ಯಾರ್ಥಿ! 
ದೇಶ

ಪಬ್ ಜಿ ಗೇಮ್ ನ ಮತ್ತು, ಜೀವಕ್ಕೆ ತಂದಿತು ಆಪತ್ತು! ಆಡಾಡ್ತಾ ಪ್ರಾಣ ಬಿಟ್ಟ 12ನೇ ತರಗತಿ ವಿದ್ಯಾರ್ಥಿ!

ಪಬ್ ಜಿ ಗೇಮ್ ನ ಸೆಳೆತಕ್ಕೆ ಜೀವವನ್ನೇ ಕಳೆದುಕೊಂಡಿರುವ ಅನೇಕ ಘಟನೆಗಳು ಉದಾಹರಣೆಯಾಗಿ ಕಣ್ಮುಂದಿವೆ. ಇಂಥಹದ್ದೇ ಘಟನೆ ಈಗ ಮಧ್ಯಪ್ರದೇಶದ ನೀಮುಚ್ ನಲ್ಲಿ ನಡೆದಿದೆ.

ಭೋಪಾಲ್: ಪಬ್ ಜಿ ಗೇಮ್ ನ ಸೆಳೆತಕ್ಕೆ ಜೀವವನ್ನೇ ಕಳೆದುಕೊಂಡಿರುವ ಅನೇಕ ಘಟನೆಗಳು ಉದಾಹರಣೆಯಾಗಿ ಕಣ್ಮುಂದಿವೆ. ಇಂಥಹದ್ದೇ ಘಟನೆ ಈಗ ಮಧ್ಯಪ್ರದೇಶದ ನೀಮುಚ್ ನಲ್ಲಿ ನಡೆದಿದೆ. 
ರಾಜಸ್ಥಾನ ಮೂಲದ ಕುಟುಂಬವೊಂದು ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕಾಗಿ ಮಧ್ಯಪ್ರದೇಶಕ್ಕೆ ಆಗಮಿಸಿದ್ದರು. ಕುಟುಂಬ ಸದಸ್ಯರೊಂದಿಗೆ ಬಂದಿದ್ದ XII ತರಗತಿ ವಿದ್ಯಾರ್ಥಿ ಮದುವೆ ಸಂಭ್ರಮದ ನಡುವೆಯೂ  ಪಬ್ ಜೀ ಗೇಮ್ ಗೆ ನಲ್ಲೇ ಮುಳುಗಿ, ಸೋತಿದ್ದರ ಶಾಕ್ ನಿಂದ ಹೃದಯಸ್ತಂಭನಕ್ಕೀಡಾಗಿ ಮೇ.26 ರಂದು ಮೃತಪಟ್ಟಿದ್ದಾನೆ. 
ಫರ್ಕಾನ್ ಖುರೇಷಿ ಮೃತ ಬಾಲಕನಾಗಿದ್ದು, ಈ ದುರ್ಘಟನೆ ನಡೆಯುವುದಕ್ಕೂ ಮುನ್ನ ಸತತ 6 ಗಂಟೆಗಳ ಕಾಲ ಪಬ್ ಜಿ ಗೇಮ್ ಆಡಿದ್ದ ಎಂದು ಪೋಷಕರು ತಿಳಿಸಿದ್ದಾರೆ.  ಮದುವೆ ಕಾರ್ಯಕ್ರಮದಲ್ಲಿಯೂ ಪಬ್ ಜಿ ಗೇಮ್ ಆಡುತ್ತಿದ್ದದ್ದನ್ನು ನೋಡಿದ ಪೋಷಕರು ಆತನನ್ನು ಬೈದಿದ್ದರು. ಆದರೂ ಜಗ್ಗದೇ ಎಂದಿನಂತೆ ಸತತವಾಗಿ ಪಬ್ ಜೀ ಗೇಮ್ ಆಡುವುದನ್ನು ಮುಂದುವರೆಸಿದ್ದ ಒಂದು ಹಂತದಲ್ಲಿ ಅಯಾನ್ ನೀನು ನನ್ನ ಆಟವನ್ನು ಸೋಲಿಸಿದೆ, ನನ್ನ ಜೀವನವನ್ನೂ ಸೋಲಿಸಿದೆ, ನಿನ್ನೊಂದಿಗೆ ಎಂದಿಗೂ ಆಡುವುದಿಲ್ಲ ಎಂದು ಜೋರಾಗಿ ಕಿರುಚಿದ್ದನ್ನು ಆತನೊಂದಿಗೇ ಇದ್ದ ಸಹೋದರಿಯರು ಗಮನಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿಆತ ತಲೆ ನೋವುತ್ತಿದೆ ಎಂದು ಕುಸಿದುಬಿದ್ದಿದ್ದಾನೆ.  
ತಕ್ಷಣವೇ ಪೋಷಕರು ಆತನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಆತ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮೃತಪಟ್ಟಿದ್ದ. ಓದಿನಲ್ಲೂ ಮುಂದಿದ್ದ ಫರ್ಕಾನ್ ಖುರೇಷಿ, 6-8 ಯುವಕರ ತಂಡ ಕಟ್ಟಿಕೊಂಡು ಕಳೆದ ಒಂದು ವರೆ ವರ್ಷದಿಂದ ಅತಿಯಾಗಿ ಪಬ್ ಜಿ ಗೇಮ್ ಆಡುತ್ತಿದ್ದ ಎಂದು ಅವರ ತಂದೆ ಹರೂನ್ ರಶಿದ್ ಖುರೇಷಿ ಹೇಳಿದ್ದಾರೆ. ಆಸ್ಪತ್ರೆ ವೈದ್ಯರ ಪ್ರಕಾರ ಸೋಲಿನಿಂದ ಏಕಾ ಏಕಿ  ಉಂಟಾದ ಶಾಕ್ ನಿಂದ ಹೃದಯಸ್ತಂಭನ ಉಂಟಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel